ಭಜ ಗೋವಿಂದಂ ಕನ್ನಡದಲ್ಲಿ ಭಾವಾರ್ಥ ಸಹಿತ

  मोहमुद्गर स्तोत्रम्
भज गोविन्दम्

ಮೋಹಮುದ್ಗರ ಸ್ತೋತ್ರಮ್
ಭಜ ಗೋವಿಂದಮ್

01
भज गोविन्दं भज गोविन्दम्
गोविन्दं भज मूढमते
सम्प्राप्ते सन्निहिते काले
नहि नहि रक्षति डुकृङ्करणे
ಭಜ ಗೋವಿಂದಂ ಭಜ ಗೋವಿಂದಮ್
ಗೋವಿಂದಂ ಭಜ ಮೂಢಮತೇ
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ಹಿ ಹಿ ರಕ್ಷತಿ ಡುಕುರುಞ್ ಕರಣೇ
 
[भज] ಭಜ = ಭಜಿಸು, [गोविन्दम्] ಗೋವಿಂದಮ್ = ಗೋವಿಂದ, [मूढमते] ಮೂಢಮತೇ = ಎಲೈ ಮೂಢ, [सम्प्राप्ते] ಸಂಪ್ರಾಪ್ತೇ = ಬಂದಾಗ, [सन्निहिते] ಸನ್ನಿಹಿತೇ = ಪ್ರಸ್ತುತ, [काले] ಕಾಲೇ = ಸಮಯ, [] = ಇಲ್ಲ, [हि] ಹಿ = ಖಂಡಿತವಾಗಿಯೂ, [रक्षति] ರಕ್ಷತಿ = ರಕ್ಷಿಸು, [डुकृङ्करणे] ಡುಕುರುಞ್ ಕರಣೇ = ವ್ಯಾಕರಣ ಶಾಸ್ತ್ರ.

ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು,
ಗೋವಿಂದನನ್ನು ಭಜಿಸು, ಎಲೈ ಮೂಢ;
ಅಂತ್ಯ ಕಾಲವು ಸಮೀಪಿಸಿರುವಾಗ
ವ್ಯಾಕರಣ ಶಾಸ್ತ್ರವು ನಿನ್ನನ್ನು ರಕ್ಷಿಸುವುದಿಲ್ಲ.

02
मूढ जहीहि धनागमतृष्णाम्
कुरु सद्बुद्धिं मनसि वितृष्णाम्
यल्लभसे निजकर्मोपात्तम्
वित्तं तेन विनोदय चित्तम्
ಮೂಢ ಜಹೀಹಿ ಧನಾಗಮತೃಷ್ಣಾಮ್
ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್
ಯಲ್ಲಭಸೇ ನಿಜಕರ್ಮೋಪಾತ್ತಮ್
ವಿತ್ತಂ ತೇನ ವಿನೋದಯ ಚಿತ್ತಮ್

 [मूढ] ಮೂಢ = ಮೂರ್ಖ, [जहीहि] ಜಹೀಹಿ = ಬಿಟ್ಟುಬಿಡು, [धनागमतृष्णाम्] ಧನಾಗಮತೃಷ್ಣಾಮ್ = ಸಂಪತ್ತಿನ ದುರಾಸೆ, [कुरु] ಕುರು = ಮಾಡು, [सद्बुद्धिम्] ಸದ್ಬುದ್ಧಿಮ್ = ಒಳ್ಳೆಯ ಬುದ್ಧಿ/ ವಾಸ್ತವದ ಯೋಚನೆ, [मनसि] ಮನಸಿ = ಮನಸ್ಸಿನಲ್ಲಿ, [वितृष्णाम्] ವಿತೃಷ್ಣಾಮ್ = ಆಸೆಯಿಂದ ಮುಕ್ತ, [यत्] ಯತ್ = ಅದು/ಏನಾದರೂ, [लभसे] ಲ್ಲಭಸೇ = ನೀವು ಪಡೆಯುತ್ತೀರಿ, [निजकर्म] ನಿಜಕರ್ಮ = ಸ್ವಂತ ಕ್ರಿಯೆ, [उपात्तम्] ಉಪಾತ್ತಮ್ = ದೊರಕಿದ್ದು, [वित्तम्] ವಿತ್ತಮ್ = ಸಂಪತ್ತು, [तेन] ತೇನ = ಅದರಿಂದ, [विनोदय] ವಿನೋದಯ = ಸಂತೋಷ, [चित्तम्] ಚಿತ್ತಮ್ = ಮನಸ್ಸು.

ಎಲೈ ಮೂಢ, ಹಣ ಸಂಪತ್ತು ಬರಬೇಕೆಂಬ ಆಸೆ ಬಿಟ್ಟುಬಿಡು.
ಮನಸ್ಸಿನಲ್ಲಿರುವ ಅನಾವಶ್ಯಕ ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡಬೇಕೆಂಬ ಬುದ್ಧಿ ಬೆಳೆಸು.
ನಿನ್ನ ಕರ್ಮಫಲಕ್ಕನುಗುಣವಾಗಿ
ಎಷ್ಟು ಸಂಪತ್ತು ದೊರೆಯುತ್ತದೆಯೋ ಅಷ್ಟರಲ್ಲಿ ಮನಸ್ಸಿಗೆ ತೃಪ್ತಿ ತಂದುಕೊಳ್ಳು.
 
03
नारीस्तनभरनाभीदेशम्
दृष्ट्वा मा गा मोहावेशम्
एतन्मांसवसादिविकारम्
मनसि विचिन्तय वारं वारम्
ನಾರೀ ಸ್ತನಭರನಾಭೀದೇಶಮ್
ದೃಷ್ಟ್ವಾಮಾ ಗಾ ಮೋಹಾವೇಶಮ್
ಏತನ್ಮಾಂಸವಸಾದಿವಿಕಾರಮ್
ಮನಸಿ ವಿಚಿಂತಯ ವಾರಂ ವಾರಮ್
 
[नारी] ನಾರೀ = ಮಹಿಳೆ, [स्तनभर] ಸ್ತನಭರ = ತುಂಬಿದ ಸ್ತನಗಳು, [नाभी] ನಾಭೀ = ಹೊಕ್ಕಳು, [देशम्] ದೇಶಮ್ = ಪ್ರದೇಶ, [दृष्ट्वा] ದೃಷ್ಟ್ವಾ = ನೋಡಿದಾಗ, [मा] ಮಾ = ಬೇಡ, [गा] ಗಾ = ಬಲಿಯಾಗು, [मोहावेशम्] ಮೋಹಾವೇಶಮ್ = ಭ್ರಮೆಯ ಸ್ಥಿತಿ, [एतत्] ಏತತ್ = ಇದು, [मांस] ಮಾಂಸ = ಮಾಂಸ, [वसा] ವಸಾ = ಕೊಬ್ಬು, [आदि] ಆದಿ = ಇತ್ಯಾದಿ, [विकारम्] ವಿಕಾರಮ್ = ರೂಪಾಂತರ, [मनसि] ಮನಸಿ = ಮನಸ್ಸಿನಲ್ಲಿ, [विचिन्तय] ವಿಚಿಂತಯ = ಪರಿಗಣಿಸಿ, [वारं वारम्] ವಾರಂ ವಾರಮ್ = ಪುನಃ ಪುನಃ.

ಸ್ತೀಯರ ಸ್ತನಗಳನ್ನು ಮತ್ತು ಹೊಕ್ಕುಳನ್ನು
ನೋಡಿ ಮೋಹಕ್ಕೊಳಗಾಗ ಬೇಡಿ,
ಇವು ಕಾಲಿ ಮಾಂಸ ಮತ್ತು ಕೊಬ್ಬು ಮಾರ್ಪಾಡಾದ ವಿಕಾರ.
ಇದನ್ನು ನಿಮ್ಮ ಮನಸ್ಸಿನಲ್ಲಿ ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಿ.
 
04
नलिनीदलगतजलमतितरलम्
तद्वज्जीवितमतिशयचपलम्
विद्धि व्याध्यभिमानग्रस्तम्
लोकं शोकहतं  समस्तम्
ನಲಿನೀದಲಗತಜಲಮತಿತರಲಮ್
ತದ್ವಜ್ಜೀವಿತಮತಿಶಯಚಪಲಮ್
ವಿದ್ಧಿ ವ್ಯಾಧ್ಯಭಿಮಾನಗ್ರಸ್ತಮ್
ಲೋಕಂ ಶೋಕಹತಂ ಸಮಸ್ತಮ್

[नलिनीदलगतजलम्] ನಲಿನೀದಲಗತಜಲಮ್ = ತಾವರೆ ಗಿಡದ ಎಳೆಯ ಮೇಲಿನ ನೀರು, [अति] ಅತಿ = ಅತ್ಯಂತ, [तरलम्] ತರಲಮ್ = ಅಸ್ಥಿರ, [तद्वत्] ತದ್ವತ್ = ಹಾಗೆನೇ, [जीवितम्] ಜ್ಜೀವಿತಮ್ = ಜೀವನ, [अतिशय] ಅತಿಶಯ = ಅತ್ಯಂತ, [चपलम्] ಚಪಲಮ್ = ಅಸ್ಥಿರ, [विद्धि] ವಿದ್ಧಿ = ಅರ್ಥಮಾಡಿಕೊಳ್ಳಿ, [व्याधि] ವ್ಯಾಧಿ = ರೋಗ, [अभिमान] ಅಭಿಮಾನ = ಅಹಂಕಾರ, [ग्रस्तम्] ಗ್ರಸ್ತಮ್ = ಪೀಡಿತ, [लोकम्] ಲೋಕಮ್ = ಪ್ರಪಂಚ, [शोक] ಶೋಕ = ದುಃಖ, [हतम्] ಹತಮ್ = ಹೊಡೆದಿದೆ, [] = ಮತ್ತು, [समस्तम्] ಸಮಸ್ತಮ್ = ಎಲ್ಲವೂ.

ತಾವರೆಗಿಡದ ಎಲೆಯ ಮೇಲೆ ಬಿದ್ದ ನೀರಿನ  ಹನಿ ಅಸ್ಥಿರ,
ಹಾಗೇನೇ ಮನುಷ್ಯನ ಜೀವನವು ಅತ್ಯಂತ ಚಂಚಲ ಮತ್ತು ಅಸ್ಥಿರ.
ರೋಗರುಜಿನ ಮತ್ತು ದುರಂಹಕಾರಗಳಿಂದ ತುಂಬಿಕೊಂಡು
ಲೋಕದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ದುಃಖ್ಖದಿಂದ ನರಳುತ್ತಿದ್ದಾರೆ.
 
05
यावद्वित्तोपार्जनसक्तः
स्तावन्निजपरिवारो रक्तः
पश्चाज्जीवति जर्जरदेहे
वार्तां कोऽपि  पृच्छति गेहे
ಯಾವದ್ವಿತ್ತೋಪಾರ್ಜನಸಕ್ತಃ
ಸ್ತಾವನ್ನಿಜಪರಿವಾರೋ ರಕ್ತಃ
ಪಶ್ಚಾಜ್ಜೀವತಿ ಜರ್ಜರದೇಹೇ
ವಾರ್ತಾಂ ಕೋsಪಿ ಪೃಚ್ಛತಿ ಗೇಹೇ

[यावत्] ಯಾವತ್ = ಎಲ್ಲಿಯವರೆಗೆ, [वित्त] ವಿತ್ತ = ಸಂಪತ್ತು, [उपार्जन] ಉಪಾರ್ಜನ = ಸಂಪಾದಿಸು, [सक्तः] ಸಕ್ತಃ = ಸಾಮರ್ಥ್ಯ ಉಳ್ಳವ, [तावत्] ತಾವತ್ = ಅಲ್ಲಿಯವರೆಗೆ, [निजपरिवारः] ನಿಜಪರಿವಾರಃ = ಸ್ವಂತ ಕುಟುಂಬ, [रक्तः] ರಕ್ತಃ = ಅನುಬಂಧ, [पश्चात्] ಪಶ್ಚಾತ್ = ಅನಂತರ, [जीवति] ಜ್ಜೀವತಿ = ಜೀವಿಸುತ್ತಾರೆ, [जर्जर] ಜರ್ಜರ = ಶಿಥಿಲಗೊಂಡ, [देहे] ದೇಹೇ = ದೇಹದಲ್ಲಿ, [वार्ताम्] ವಾರ್ತಾಮ್ = ಸಂವಾದ, [कोऽपि] ಕೋsಪಿ = ಯಾರೂ, [] = ಇಲ್ಲ, [पृच्छति] ಪೃಚ್ಛತಿ = ವಿಚಾರಿಸು, [गेहे] ಗೇಹೇ = ಮನೆಯಲ್ಲಿ.

ಒಬ್ಬ ಸಂಪಾದನೆ ಮಾಡಿ ಕುಟುಂಬವನ್ನು ಪೋಷಿಸಲು ಸಮರ್ಥನಾಗಿರುವವರೆಗೆ
ಅವನ ಬಂಧುಗಳು ಅವನನ್ನು ಪ್ರೀತಿಯಿಂದ ಆದರಿಸುತ್ತಾರೆ.
ಆದರೆ ಮುದಿತನದಲ್ಲಿ ದೇಹ ಬಲಹೀನವಾದಾಗ
ಮನೆಯಲ್ಲಿ ಯಾರೂ ವಿಚಾರಿಸಲು ಬರುವುದಿಲ್ಲ.

06
यावत्पवनो निवसति देहे
तावत्पृच्छति कुशलं गेहे
गतवति वायौ देहापाये
भार्या बिभ्यति तस्मिन्काये
ಯಾವತ್ಪವನೋ ನಿವಸತಿ ದೇಹೇ
ತಾವತ್ಪೃಚ್ಛತಿ ಕುಶಲಂ ಗೇಹೇ
ಗತವತಿ ವಾಯೌ ದೇಹಾಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ

[यावत्] ಯಾವತ್ = ಎಲ್ಲಿಯವರೆಗೆ, [पवनः] ಪವನಃ = ಗಾಳಿ (ಉಸಿರು), [निवसति] ನಿವಸತಿ = ವಾಸವಾಗಿರು, [देहे] ದೇಹೇ = ದೇಹದಲ್ಲಿ, [तावत्] ತಾವತ್ = ಅಲ್ಲಿಯವರೆಗೆ, [पृच्छति] ಪೃಚ್ಛತಿ = ವಿಚಾರಿಸು, [कुशलम्] ಕುಶಲಮ್ = ಯೋಗಕ್ಷೇಮ, [गेहे] ಗೇಹೇ = ಮನೆಯಲ್ಲಿ, [गतवति] ಗತವತಿ = ಹೋದ ಮೇಲೆ, [वायौ] ವಾಯೌ = ಉಸಿರು, [देह] ದೇಹ = ದೇಹ, [अपाये] ಅಪಾಯೇ = ಕೊಳೆಯುವುದು, [भार्या] ಭಾರ್ಯಾ = ಹೆಂಡತಿ, [बिभ्यति] ಬಿಭ್ಯತಿ = ಭಯಪಡು, [तस्मिन्] ತಸ್ಮಿನ್ = ಅದೇ, [काये] ಕಾಯೇ = ದೇಹದ.

ಎಲ್ಲಿಯವರೆಗೆ ದೇಹದಲ್ಲಿ ಪ್ರಾಣವಿರುತ್ತದೋ
ಅಲ್ಲಿಯವರೆಗೆ ಎಲ್ಲರೂ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿರುತ್ತಾರೆ.
ಆದರೆ ದೇಹದಿಂದ ಪ್ರಾಣವಾಯು ಹೊರಟು ಹೋದ ಮೇಲೆ
ಹೆಂಡತಿಯೂ ಕೂಡ ಹೆಣದ ಹತ್ತಿರ ಬರಲು ಭಯಪಡುತ್ತಾಳೆ.

 07
बालस्तावत्क्रीडासक्तः
तरुणस्तावत्तरुणीसक्तः
वृद्धस्तावच्चिन्तासक्तः
परमे ब्रह्मणि कोऽपि  सक्तः
 ಬಾಲಸ್ತಾವತ್ಕ್ರೀಡಾಸಕ್ತಃ
ತರುಣಸ್ತಾವತ್ತರುಣೀಸಕ್ತಃ
ವೃದ್ಧಸ್ತಾವತ್ಚಿಂತಾಸಕ್ತಃ
ಪರಮೇ ಬ್ರಹ್ಮಣಿ ಕೋsಪಿ ಸಕ್ತಃ

[बालः] ಬಾಲಃ = ಮಕ್ಕಳು, [तावत्] ತಾವತ್ = ಎಲ್ಲಿಯವರೆಗೆ, [क्रीडा] ಕ್ರೀಡಾ = ಆಟ, [आसक्तः] ಆಸಕ್ತಃ = ಆಸಕ್ತಿ, [तरुणः] ತರುಣಃ = ಯುವಕ, [तावत्] ತಾವತ್ = ಎಲ್ಲಿಯವರೆಗೆ, [तरुणी] ತರುಣೀ = ಯುವತಿ, [सक्तः] ಸಕ್ತಃ = ಆಸಕ್ತಿ, [वृद्धः] ವೃದ್ಧಃ = ಮುದುಕ, [तावत्] ತಾವತ್ = ಎಲ್ಲಿಯವರೆಗೆ, [चिन्ता] ಚಿನ್ತಾ = ಚಿಂತೆ, [सक्तः] ಸಕ್ತಃ = ಆಸಕ್ತಿ, [परमे] ಪರಮೇ = ಸರ್ವೋಚ್ಚ, [ब्रह्मणि] ಬ್ರಹ್ಮಣಿ = ಬ್ರಹ್ಮ (ವಾಸ್ತವ), [कोऽपि] ಕೋsಪಿ = ಯಾರೂ, [] = ಇಲ್ಲ, [सक्तः] ಸಕ್ತಃ = ಆಸಕ್ತಿ.

ಬಾಲ್ಯಾವಸ್ಥೆಯಲ್ಲಿ ಆಟದ ಮೇಲೆ ಆಸಕ್ತಿ,
ತರುಣಾವಸ್ಥೆಯಲ್ಲಿ ತರುಣಿಯರ ಮೇಲೆ ಆಸಕ್ತಿ,
ವೃದ್ಧಾಪ್ಯದಲ್ಲಿ ಅನೇಕ ವಿಷಯಗಳ ಚಿಂತೆ,
ಆದರೆ ಪರಬ್ರಹ್ಮನ ಯೋಚನೆ ಮಾಡಲು ಆಗುತ್ತಿಲ್ಲ.

 08
का ते कान्ता कस्ते पुत्रः
संसारोऽयमतीव विचित्रः
कस्य त्वं कः कुत आयातः
तत्त्वं चिन्तय तदिह भ्रातः
ಕಾ ತೇ ಕಾಂತಾ ಕಸ್ತೇ ಪುತ್ರಃ
ಸಂಸಾರೋsಯಮತೀವ ವಿಚಿತ್ರಃ
ಕಸ್ಯ ತ್ವಂ ಕಃ ಕುತ ಆಯಾತಃ
ತತ್ತ್ವಂ ಚಿಂತಯ ತದಿಹ ಭ್ರಾತಃ

[का] ಕಾ = ಯಾರು, [ते] ತೇ = ನಿನ್ನ, [कान्ता] ಕಾಂತಾ = ಹೆಂಡತಿ, [कः] ಕಃ = ಯಾರು, [ते] ತೇ = ನಿನ್ನ, [पुत्रः] ಪುತ್ರಃ = ಮಗ, [संसारः] ಸಂಸಾರಃ = ಜಗತ್ತು, [अयम्] ಅಯಮ್ = ಈ/ಇದು, [अतीव] ಅತೀವ = ಅತ್ಯಂತ, [विचित्रः] ವಿಚಿತ್ರಃ = ವಿಚಿತ್ರ, [कस्य] ಕಸ್ಯ = ಯಾರದು, [त्वम्] ತ್ವಮ್ = ನೀನು, [कः] ಕಃ = ಯಾರು, [कुतः] ಕುತಃ = ಎಲ್ಲಿಂದ, [आयातः] ಆಯಾತಃ = ಬಂದಿರುವೆ, [तत्त्वम्] ತತ್ತ್ವಮ್ = ಸತ್ಯದ ಜ್ಞಾನ, [चिन्तय] ಚಿಂತಯ = ಆಲೋಚಿಸಿ, [तत्] ತತ್ = ಅದು, [इह] ಇಹ = ಇಲ್ಲಿ, [भ्रातः] ಭ್ರಾತಃ = ಸಹೋದರ.

ನಿನ್ನ ಹೆಂಡತಿ ಯಾರು? ನಿನ್ನ ಮಗ ಯಾರು?
ಸಂಸಾರವು ತುಂಬ ವಿಚಿತ್ರವಾದದ್ದು,
ನೀನು ಯಾರು? ಇಲ್ಲಿಗೆ ಎಲ್ಲಿಂದ ಬಂದಿರುವೆ?
ಇವುಗಳ ಸತ್ಯ ಸಂಗತಿ ಏನೆಂಬುದನ್ನು ಯೋಚಿಸು ತಮ್ಮ.

09
सत्सङ्गत्वे निस्सङ्गत्वम्
निस्सङ्गत्वे निर्मोहत्वम्
निर्मोहत्वे निश्चलतत्त्वम्
निश्चलतत्त्वे जीवन्मुक्तिः
ಸತ್ಸಂಗತ್ವೇ ನಿಸ್ಸಂಗತ್ವಮ್
ನಿಸ್ಸಂಗತ್ವೇ ನಿರ್ಮೋಹತ್ವಮ್
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ

[सत्सङ्गत्वे] ಸತ್ಸಂಗತ್ವೇ = ಒಳ್ಳೆಯವರ ಸಹವಾಸದಿಂದ, [निस्सङ्गत्वम्] ನಿಸ್ಸಂಗತ್ವಮ್ = ಲೌಕಿಕ ವ್ಯಾಮೋಹದಿಂದ ಮುಕ್ತಿ, [निस्सङ्गत्वे] ನಿಸ್ಸಂಗತ್ವೇ = ಲೌಕಿಕ ವ್ಯಾಮೋಹದ ಮುಕ್ತಿಯಿಂದ, [निर्मोहत्वम्] ನಿರ್ಮೋಹತ್ವಮ್ = ಭ್ರಮೆಯಿಂದ ಸ್ವಾತಂತ್ರ್ಯ, [निर्मोहत्वे] ನಿರ್ಮೋಹತ್ವೇ = ಭ್ರಮೆಮುಕ್ತ ಸ್ಥಿತಿಯಲ್ಲಿ, [निश्चल] ನಿಶ್ಚಲ = ಸ್ಥಿರ, [तत्त्वम्] ತತ್ತ್ವಮ್ = ನಿಜವಾದ ತತ್ವ (ಸತ್ಯದ ಜ್ಞಾನ), [निश्चलतत्त्वे] ನಿಶ್ಚಲತತ್ತ್ವೇ = ಸತ್ಯದ ಜ್ಞಾನದಿಂದ, [जीवन्मुक्तिः] ಜೀವನ್ಮುಕ್ತಿಃ = ಜೀವನ್ಮುಕ್ತಿ.

ಸಜ್ಜನರ ಸಹವಾಸದಿಂದ ಅನಾವಶ್ಯ ಆಸಕ್ತಿಗಳಿಂದ ಮುಕ್ತನಾಗ ಬಹುದು,
ಅನಾವಶ್ಯ ಆಸಕ್ತಿಗಳಿಂದ ಮುಕ್ತನಾದರೆ ದುರಾಸೆ ಮತ್ತು ಮೋಹವು ನಾಶವಾಗುತ್ತದೆ,
ಮೋಹದಿಂದ ಮುಕ್ತನಾದರೆ ಶಾಶ್ವತ ಸತ್ಯದ ಜ್ಞಾನವಾಗುತ್ತದೆ,
ಸತ್ಯದ ಜ್ಞಾನದಿಂದ ಜೀವನ್ಮುಕ್ತಿ ಪ್ರಾಪ್ತಿಯಾಗುವುದು.

10
वयसि गते कः कामविकारः
शुष्के नीरे कः कासारः
क्षीणे वित्ते कः परिवारः
ज्ञाते तत्त्वे कः संसारः
ವಯಸಿ ಗತೇ ಕಃ ಕಾಮವಿಕಾರಃ
ಶುಷ್ಕೇ ನೀರೇ ಕಃ ಕಾಸಾರಃ
ಕ್ಷೀಣೇ ವಿತ್ತೇ ಕಃ ಪರಿವಾರಃ
ಜ್ಞಾತೇ ತತ್ತ್ವೇ ಕಃ ಸಂಸಾರಃ

[वयसि गते] ವಯಸಿ ಗತೇ = ಯೌವನವು ಕಳೆದುಹೋದ ಮೇಲೆ, [कः] ಕಃ = ಏನು/ಎಲ್ಲಿದೆ, [कामविकारः] ಕಾಮವಿಕಾರಃ = ಲೈಂಗಿಕ ಬಯಕೆ, [शुष्के नीरे] ಶುಷ್ಕೇ ನೀರೇ = ನೀರು ಬತ್ತಿಹೋದ ಮೇಲೆ, [कः] ಕಃ = ಏನು/ಎಲ್ಲಿದೆ, [कासारः] ಕಾಸಾರಃ = ಕೆರೆ, [क्षीणे वित्ते] ಕ್ಷೀಣೇ ವಿತ್ತೇ = ಸಂಪತ್ತು ಕಡಿಮೆಯಾದಾಗ, [कः] ಕಃ = ಏನು/ಎಲ್ಲಿದೆ, [परिवारः] ಪರಿವಾರಃ = ಕುಟುಂಬ, [ज्ञाते तत्त्वे] ಜ್ಞಾತೇ ತತ್ತ್ವೇ = ಸತ್ಯವನ್ನು (ತತ್ವ) ತಿಳಿದ ನಂತರ, [कः] ಕಃ = ಏನು/ಎಲ್ಲಿದೆ, [संसारः] ಸಂಸಾರಃ = ಸಂಸಾರ (ಲೋಕ).

ವಯಸ್ಸು ಕಳೆದು ಹೋದ ಮೇಲೆ ಕಾಮವಿಕಾರವೆಲ್ಲಿರುತ್ತದೆ?
ನೀರು ಒಣಗಿ ಹೊದ ಮೇಲೆ ಕೆರೆಯೆಲ್ಲಿರುತ್ತದೆ?
ಸಂಪತ್ತು ಇಲ್ಲವಾದಾಗ ಪರಿವಾರದವರೆಲ್ಲಿರುತ್ತಾರೆ?
ತತ್ತ್ವಜ್ಞಾನವಾದಾಗ ಸಂಸಾರ ಎಲ್ಲಿದ್ದೀತು?

11
मा कुरु धनजनयौवनगर्वम्
हरति निमेषात्कालः सर्वम्
मायामयमिदमखिलं बुध्वा
ब्रह्मपदं त्वं प्रविश विदित्वा
ಮಾ ಕುರು ಧನಜನಯೌವನಗರ್ವಮ್
ಹರತಿ ನಿಮೇಷಾತ್ಕಾಲಃ ಸರ್ವಮ್
ಮಾಯಾಮಯಮಿದಮಖಿಲಂ ಬುಧ್ವಾ
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ

[मा] ಮಾ = ಬೇಡ, [कुरु] ಕುರು = ಮಾಡು, [धन] ಧನ = ಸಂಪತ್ತು, [जन] ಜನ = ಜನರು, [यौवन] ಯೌವನ = ಯೌವನ, [गर्वम्] ಗರ್ವಮ್ = ಹೆಮ್ಮೆ, [हरति] ಹರತಿ = ಕಿತ್ತುಕೊಳ್ಳು, [निमेषात्] ನಿಮೆಷಾತ್ = ನಿಮಿಷದಲ್ಲಿ, [कालः] ಕಾಲಃ = ಸಮಯ, [सर्वम्] ಸರ್ವಮ್ = ಎಲ್ಲವೂ, [मायामयम्] ಮಾಯಾಮಯಮ್ = ಮಾಯಾಜಾಲ, [इदम्] ಇದಮ್ = ಇದು, [अखिलम्] ಅಖಿಲಮ್ = ಎಲ್ಲವೂ, [बुध्वा] ಬುಧ್ವಾ = ಅರ್ಥಮಾಡಿಕೊಂಡ ನಂತರ, [ब्रह्मपदम्] ಬ್ರಹ್ಮಪದಮ್ = ಬ್ರಹ್ಮಪದ/ವಾಸ್ತವದ ಸ್ಥಿತಿ, [त्वम्] ತ್ವಮ್ = ನೀನು, [प्रविश] ಪ್ರವಿಶ = ಪ್ರವೇಶ, [विदित्वा] ವಿದಿತ್ವಾ = ತಿಳಿದುಕೊಂಡ ನಂತರ.

ಸಂಪತ್ತು, ಜನಬಲ, ಯವ್ವನ ಇದೆ ಎಂದು ಹೆಮ್ಮೆಪಡ ಬೇಡಿ.
ಇವೆಲ್ಲವೂ ಒಂದೇ ನಿಮಿಷದಲ್ಲಿ ಕಳೆದುಹೋಗ ಬಹುದು.
ಇವೆಲ್ಲ ಅಶಾಶ್ವತ ಮಾಯಾಲೋಕದ ಭ್ರಮೆ ಎಂಬ ಅರಿವು ಆದ ಮೇಲೆ
ನೀವು ಬ್ರಹ್ಮಪದದ ಪ್ರವೇಶ ಮಾಡುವುರಿ.

12
दिनयामिन्यौ सायं प्रातः
शिशिरवसन्तौ पुनरायातः
कालः क्रीडति गच्छत्यायुः
तदपि  मुञ्चत्याशावायुः
ದಿನಯಾಮಿನ್ಯೌ ಸಾಯಂ ಪ್ರಾತಃ
ಶಿಶಿರವಸಂತೌ ಪುನರಾಯಾತಃ
ಕಾಲಃಕ್ರೀಡತಿ ಗಚ್ಛತ್ಯಾಯುಃ
ತದಪಿ ಮುಂಚತ್ಯಾಶಾವಯುಃ

[दिनयामिन्यौ] ದಿನಯಾಮಿನ್ಯೌ = ಹಗಲು ಮತ್ತು ರಾತ್ರಿ, [सायम्] ಸಾಯಮ್ = ಸಂಜೆ, [प्रातः] ಪ್ರಾತಃ = ಬೆಳಿಗ್ಗೆ, [शिशिरवसन्तौ] ಶಿಶಿರವಸಂತೌ = ಚಳಿಗಾಲ ಮತ್ತು ವಸಂತಕಾಲ, [पुनः] ಪುನಃ = ಮತ್ತೆ, [आयातः] ಆಯಾತಃ = ಬರುವುದು, [कालः] ಕಾಲಃ = ಸಮಯ, [क्रीडति] ಕ್ರೀಡತಿ = ಆಡುತ್ತದೆ, [गच्छति] ಗಚ್ಛತಿ = ಹೋಗುತ್ತದೆ, [आयुः} ಆಯುಃ = ಆಯುಸ್ಸು, [तदपि] ತದಪಿ = ಆದರೂ, [] = ಇಲ್ಲ, [मुञ्चति] ಮುಙ್ಚತಿ = ಬಿಟ್ಟುಬಿಡು, [आशावायुः] ಆಶಾವಯುಃ = ಆಸೆಯ ಬಿರುಗಾಳಿ.

ಹಗಲು ಮತ್ತು ರಾತ್ರಿ, ಸಂಜೆ ಮತ್ತು ಪ್ರಾತಃಕಾಲ
ಚಳಿಗಾಲ ಮತ್ತು ವಸಂತಋತು ಮುಂತಾದವೆಲ್ಲವೂ ಪುನಃ ಪುನಃ ಬಂದು ಹೊಗುತ್ತವೆ,
ಇದು ಸಮಯದ ಆಟ, ಇದರಲ್ಲಿ ಮನುಷ್ಯನ ಆಯಸ್ಸು ಕಳೆದುಹೋಗುತ್ತದೆ.
ಇದೆಲ್ಲ ತಿಳಿದಿದ್ದರೂ ಆಸೆಯ ಬಿರುಗಾಳಿ ಬಿಟ್ಟು ಹೋಗುವುದಿಲ್ಲ.

13
का ते कान्ता धनगतचिन्ता
वातुल किं तव नास्ति नियन्ता
त्रिजगति सज्जनसङ्गतिरेका
भवति भवार्णवतरणे नौका
ಕಾ ತೇ ಕಾಂತಾ ಧನಗತಚಿಂತಾ
ವಾತುಲ ಕಿಂ ತವ ನಾಸ್ತಿ ನಿಯಂತಾ
ತ್ರಿಜಗತಿ ಸಜ್ಜನಸಂಗತಿರೇಕಾ
ಭವತಿ ಭವಾರ್ಣವತರಣೇ ನೌಕಾ

[का] ಕಾ = ಏನು, [ते] ತೇ = ಅವರು, [कान्ता] ಕಾಂತಾ = ಪ್ರಿಯರು, [धनगत] ಧನಗತ = ಸಂಪತ್ತಿನ, [चिन्ता] ಚಿಂತಾ = ಚಿಂತೆ, [वातुल] ವಾತುಲ = ಭ್ರಷ್ಟಚೇತನ, [किम्] ಕಿಮ್ = ಏನು, [तव] ತವ = ನಿಮ್ಮ, [] = ಇಲ್ಲ, [अस्ति] ಅಸ್ತಿ = ಇದೆ, [नियन्ता] ನಿಯಂತಾ = ಆದೇಶ ನೀಡುವವರು, [त्रिजगति] ತ್ರಿಜಗತಿ = ಮೂರು ಲೋಕಗಳಲ್ಲಿ, [सज्जन] ಸಜ್ಜನ = ಉತ್ತಮ ಗುಣವಂತ, [सङ्गतिः] ಸಙ್ಗತಿಃ = ಒಡನಾಟ, [एका] ಏಕಾ = ಒಂದೇ, [भवति] ಭವತಿ = ಆಗುವುದು, [भवार्णवतरणे = भव अर्णव तरणे] ಭವಾರ್ಣವತರಣೇ = ಅಸ್ತಿತ್ವದ ಮಹಾಸಾಗರದಲ್ಲಿ, [नौका] ನೌಕಾ = ದೋಣಿ.

ನಿನಗೆ ಹೆಂಡತಿ ಮತ್ತು ಸಂಪತ್ತಿನ ಚಿಂತೆ ಯಾಕೆ?
ನಿನಗೆ ಬುದ್ದಿ ಹೇಳಿ ದಾರಿ ತೋರಿಸುವವರು ಯಾರೂ ಇಲ್ಲವೆ?
ಮೂರು ಲೋಕಗಳಲ್ಲಿಯೂ ಸತ್ಸಂಗವೆಂಬುದೊಂದೇ
ಸಂಸಾರಸಾಗರವನ್ನು ದಾಟಿಸಬಲ್ಲ ದೋಣಿಯಾಗಿರುತ್ತದೆ.

14
जटिलो मुण्डी लुञ्छितकेशः
काषायाम्बरबहुकृतवेषः
पश्यन्नपि   पश्यति मूढः
उदरनिमित्तं बहुकृतवेषः
ಜಟಿಲೋ ಮುಂಡೀ ಲುಂಚಿತಕೇಶಃ
ಕಾಷಾಯಾಂಬರಬಹುಕೃತ ವೇಷಃ
ಪಶ್ಯನ್ನಪಿ ಪಶ್ಯತಿ ಮೂಢಃ
ಉದರನಿಮಿತ್ತಂ ಬಹುಕೃತವೇಷಃ

[जटिलः] ಜಟಿಲಃ = ಜಡೆ, [मुण्डी] ಮುಂಡೀ = ಬೋಳಿಸಿದ ತಲೆ ಬೋಳಿಸಿದ ತಲೆ, [लुञ्छित] luñchita = ಹರಿದ, [केशः] ಕೇಶಃ = ಕೂದಲು, [काषायाम्बरबहुकृतवेषः] ಕಾಷಾಯಾಂಬರಬಹುಕೃತ ವೇಷಃ = ಕಾವಿ ಬಣ್ಣದ ಅನೇಕ ವಿಧದ ಉಡುಪುಗಳನ್ನು ಧರಿಸಿದವರು. [पश्यन्नपि]] ಪಶ್ಯನ್ನಪಿ = ನೋಡಿದರೂ, [] = ಮತ್ತು, [] = ಇಲ್ಲ, [पश्यति] ಪಶ್ಯತಿ = ಕಾಣುವುದು, [मूढः] ಮೂಢಃ = ಮೂರ್ಖ, [उदरनिमित्तम्] ಉದರನಿಮಿತ್ತಮ್ = ಹೊಟ್ಟೆಪಾಡಿಗಾಗಿ, [बहुकृतवेषः] ಬಹುಕೃತವೇಷಃ = ಅನೇಕ ರೂಪಗಳು.

ಕೆಲವರು ಜಡೆ ಬಿಟ್ಟವರು, ಇನ್ನು ಕೆಲವರು ತಲೆ ಬೋಳಿಸಿಕೊಂಡವರು,
ಮತ್ತೆ ಕೆಲವರು ಕೂದಲು ಚಲ್ಲಾಪಿಲ್ಲಿ ಬಿಟ್ಟವರು, ಕಾವಿ ಬಟ್ಟೆ ಉಟ್ಟವರು ಹಾಗೂ ಬೇರೆ ಬೇರೆ ಅಲಂಕಾರದ ವೇಷದವರು ಇದ್ದಾರೆ.
ಕಣ್ಣಿಗೆ ಕಾಣುತ್ತಿದ್ದರೂ ಸತ್ಯವನ್ನು ಕಾಣಲಾರದ ಇಂತಹ ಮೂಢರಿದ್ದಾರೆ.
ಹೊಟ್ಟೆಪಾಡಿಗಾಗಿ ನಾನಾ ವೇಷವನ್ನು ಧರಿಸಿರುತ್ತಾರೆ.

15
अङ्गं गलितं पलितं मुण्डम्
दशनविहीनं जातं तुण्डम्
वृद्धो याति गृहीत्वा दण्डम्
तदपि  मुञ्चत्याशापिण्डम्
ಅಂಗಂ ಗಲಿತಂ ಪಲಿತಂ ಮುಂಡಮ್
ದಶನವಿಹೀನಂ ಜಾತಂ ತುಂಡಮ್
ವೃದ್ಧೋ ಯಾತಿ ಗೃಹೀತ್ವಾ ದಂಡಮ್
ತದಪಿ ಮುಂಚತ್ಯಾಶಾಪಿಂಡಮ್

[अङ्गम्] ಅಂಗಮ್ = ಕೈಕಾಲು, [गलितम्] ಗಲಿತಮ್ = ಬಲಹೀನವಾಗು, [पलितम्] ಪಲಿತಮ್ = ನೆರೆತ ಕೂದಲು, [मुण्डम्] ಮುಂಡಮ್ = ತಲೆ, [दशन] ದಶನ = ಹಲ್ಲು, [विहीनम्] ವಿಹೀನಮ್ = ಇಲ್ಲದಿರು, [जातम्] ಜಾತಮ್ = ಆಗಿಹೋಗಿದೆ, [तुण्डम्] ತುಂಡಮ್ = ಬಾಯಿ, [वृद्धः] ವೃಧಃ = ಮುದುಕ, [याति] ಯಾತಿ = ಚಲಿಸುತ್ತಾನೆ, [गृहीत्वा] ಗೃಹೀತ್ವಾ = ಹಿಡಿದುಕೊಂಡು, [दण्डम्] ದಂಡಮ್ = ದಂಟೆ, [तदपि] ತದಪಿ = ಆದರೂ, [] = ಇಲ್ಲ, [मुञ्चति] ಮುಂಚತಿ = ಬಿಟ್ಟುಬಿಡು, [अशापिण्डम्] ಆಶಾಪಿಂಡಮ್ = ಆಶೆಗಳ ಕಂತೆ.

ವಯಸ್ಸಾದ ಮೇಲೆ ಅಂಗಾಂಗಗಳು ಬಲಹೀನವಾಗುತ್ತವೆ, ತಲೆಕೂದಲು ನೆರೆತು ಬೆಳ್ಳಗಾಗಿರುತ್ತದೆ.
ಬಾಯಿಯಲ್ಲಿದ್ದ ಹಲ್ಲುಗಳೆಲ್ಲ ಉದುರಿಹೋಗಿರುತ್ತವೆ.
ಮುದುಕನು ದೊಣ್ಣೆ ಹಿಡಿದು ನಡೆಯ ಬೇಕಾಗುತ್ತದೆ.
ಇಷ್ಟಾದರೂ ಆಶೆಗಳ ಕಂತೆ ಬಿಟ್ಟು ಹೋಗುವುದಿಲ್ಲ.

16
अग्रे वह्निः पृष्ठे भानुः
रात्रौ चुबुकसमर्पितजानुः
करतलभिक्षस्तरुतलवासः
तदपि  मुञ्चत्याशापाशः
ಅಗ್ರೇ ವಹ್ನಿಃ ಪೃಷ್ಠೇ ಭಾನುಃ
ರಾತ್ರೌ ಚುಬುಕಸಮರ್ಪಿತಜಾನುಃ
ಕರತಲಭಿಕ್ಷಸ್ತರುತಲವಾಸಃ
ತದಪಿ ಮುಂಚತ್ಯಾಶಾಪಾಶಃ

[अग्रे] ಅಗ್ರೇ = ಮುಂದೆ, [वह्निः] ವಹ್ನಿಃ = ಬೆಂಕಿ, [पृष्ठे] ಪೃಷ್ಠೇ = ಹಿಂಭಾಗದಲ್ಲಿ, [भानुः] ಭಾನುಃ = ಸೂರ್ಯ, [रात्रौ] ರಾತ್ರೌ = ರಾತ್ರಿಯಲ್ಲಿ, [चुबुकसमर्पितजानुः] ಚುಬುಕಸಮರ್ಪಿತಜಾನುಃ = ಮೊಳಕಾಲು ಗಲ್ಲಕ್ಕೆ ಮುಟ್ಟುವಹಾಗೆ, [करतलभिक्षः] ಕರತಲಭಿಕ್ಷಃ = ಅಂಗೈಯಿಂದ ಭಿಕ್ಷೆ ಬೇಡಿ, [तरुतलवासः] ತರುತಲವಾಸಃ = ಮರದ ಕೆಳಗೆ ವಾಸ, [तदपि] ತದಪಿ = ಆದರೂ, [] = ಇಲ್ಲ, [मुञ्चति] ಮುಂಚತಿ = ಬಿಟ್ಟುಬಿಡು, [आशापाशः] ಆಶಾಪಾಶಃ = ಆಶಾಪಾಶ.

ಚಳಿಯಲ್ಲಿ ಮುಂದೆ ಬೆಂಕಿಯಿಂದ ಮತ್ತು ಹಿಂದೆ ಬೆನ್ನನ್ನು ಸೂರ್ಯನ ಬಿಸಿಲಿನಿಂದ ಕಾಯಿಸಿಕೊಂಡು,
ರಾತ್ರಿ ಮೊಳಕಾಲನ್ನು ಗಲ್ಲಕ್ಕೆ ಮುಟ್ಟುವಹಾಗೆ ಬಾಗಿ ಮಲಗುತ್ತಾರೆ.
ಬರಿ ಕೈಯಲ್ಲಿ ಭಿಕ್ಷೆ ಬೇಡಿ ಮರದ ಕೆಳಗೆ ವಾಸ ಮಾಡುತ್ತಾರೆ.
ಆದರೂ ಇವರು ಆಶಾಪಾಶದಿಂದ ಬಿಡುಗಡೆ ಹೊಂದಿರುವುದಿಲ್ಲ

17
कुरुते गङ्गासागरगमनम्
व्रतपरिपालनमथवा दानम्
ज्ञानविहीनः सर्वमतेन
भजति  मुक्तिं जन्मशतेन
ಕುರುತೇ ಗಂಗಾಸಾಗರಗಮನಮ್
ವ್ರತಪರಿಪಾಲನಮಥವಾ ದಾನಮ್
ಜ್ಞಾನವಿಹೀನಃ ಸರ್ವಮತೇನ
ಭಜತಿ ನ ಮುಕ್ತಿಂ ಜನ್ಮಶತೇನ

[कुरुते] ಕುರುತೇ = ಮಾಡುವರು, [गङ्गासागरगमनम्] ಗಂಗಾಸಾಗರಗಮನಮ್ = ಗಂಗಾ ನದಿ ಸಾಗರವನ್ನು ಸೇರುವ ಜಾಗ, [व्रतपरिपालनम्] ವ್ರತಪರಿಪಾಲನಮ್ = ವ್ರತಗಳ ಆಚರಣೆ, [अथवा] ಅಥವಾ = ಅಥವಾ, [दानम्] ದಾನಮ್ = ದಾನ, [ज्ञानविहीनः] ಜ್ಞಾನವಿಹೀನಃ = ಜ್ಞಾನವಿಲ್ಲದ ವ್ಯಕ್ತಿ, [सर्वमतेन] ಸರ್ವಮತೇನ = ಎಲ್ಲಾ ಅಭಿಪ್ರಾಯಗಳಿಂದ, [भजति] ಭಜತಿ = ಪಡೆಯುವುದು, [] = ಇಲ್ಲ, [मुक्तिम्] ಮುಕ್ತಿಮ್ = ಮುಕ್ತಿ/ವಿಮೋಚನೆ, [जन्मशतेन] ಜನ್ಮಶತೇನ = ನೂರು ಜನ್ಮದಲ್ಲೂ.

ಕೆಲವರು ತೀರ್ಥಯಾತ್ರೆಗೆ ಗಂಗಾನದಿ ಸಮುದ್ರಕ್ಕೆ ಸೇರುವ ಜಾಗಕ್ಕೆ ಹೋಗಿ ಸ್ನಾನ ಮಾಡಬಹುದು,
ನಾನಾ ವ್ರತಗಳನ್ನು ಆಚರಿಸ ಬಹುದು, ದಾನ ಮಾಡ ಬಹುದು,
ಆದರೆ ಆತ್ಮ ಜ್ಞಾನ ಗಳಿಸದೆ
ನೂರು ಜನ್ಮ ಕಳೆದರೂ ಅವರಿಗೆ ಮೋಕ್ಷ ಸಿಗದು.

18
सुरमंदिरतरुमूलनिवासः
शय्या भूतलमजिनं वासः
सर्वपरिग्रहभोगत्यागः
कस्य सुखं  करोति विरागः
ಸುರಮಂದಿರತರುಮೂಲನಿವಾಸಃ
ಶಯ್ಯಾ ಭೂತಲಮಜಿನಂ ವಾಸಃ
ಸರ್ವಪರಿಗ್ರಹಭೋಗತ್ಯಾಗಃ
ಕಸ್ಯ ಸುಖಂ ಕರೋತಿ ವಿರಾಗಃ

[सुरमंदिरतरुमूलनिवासः] ಸುರಮಂದಿರತರುಮೂಲನಿವಾಸಃ = ದೇವಾಲಯ ಅಥವಾ ಮರದ ಕೆಳಗೆ ವಾಸಮಾಡಿಕೊಂಡು, [शय्या] ಶಯ್ಯಾ = ಹಾಸಿಗೆ, [भूतलम्] ಭೂತಲಮ್ = ಭೂಮಿಯನ್ನು, [अजिनम्] ಅಜಿನಮ್ = ಕಾಡು ಪ್ರಾಣಿಯ ಚರ್ಮ, [वासः] ವಾಸಃ = ವಸತಿ, [सर्व] ಸರ್ವ = ಎಲ್ಲಾ, [पारिग्रहः] ಪರಿಗ್ರಹ = ಆಸ್ತಿ ಪಾಸ್ತಿಗಳು, [भोगः] ಭೋಗಃ = ಆನಂದ, [त्यागः] ತ್ಯಾಗಃ = ಬಿಟ್ಟುಬಿಡು, [कस्य] ಕಸ್ಯ = ಯಾರು, [सुखम्] ಸುಖಂ = ಸುಖ, [] = ಇಲ್ಲ, [करोति] ಕರೋತಿ = ಮಾಡು, [विरागः] ವಿರಾಗಃ = ವೈರಾಗ್ಯ.

ದೇವಾಲಯ ಅಥವಾ ಮರದ ಕೆಳಗೆ ವಾಸಮಾಡಿಕೊಂಡು,
ಜಿಂಕೆಯ ಚರ್ಮ ಧರಿಸಿ ನೆಲವನ್ನೇ ಹಾಸಿಗೆ ಮಾಡಿಕೊಂಡು,
ಎಲ್ಲಾ ಭೌತಿಕ ಸುಖದ ಸಾಧನಗಳನ್ನು ತ್ಯಜಿಸಿದರೆ
ಯಾರಿಗೆತಾನೇ ಜೀವನದಲ್ಲಿ ವೈರಾಗ್ಯ ಮತ್ತು ಸುಖ ದೊರಕದು?

19
योगरतो वा भोगरतो वा
सङ्गरतो वा सङ्गविहीनः
यस्य ब्रह्मणि रमते चित्तम्
नन्दति नन्दति नन्दत्येव
ಯೋಗರತೋ ವಾ ಭೋಗರತೋ ವಾ
ಸಂಗರತೋ ವಾ ಸಂಗವಿಹೀನಃ
ಯಸ್ಯ ಬ್ರಹ್ಮಣಿ ರಮತೇ ಚಿತ್ತಮ್
ನಂದತಿ ನಂದತಿ ನಂದತ್ಯೇವ

[योगरतः] ಯೋಗರತಃ = ಯೋಗದಲ್ಲಿ ಆನಂದ ಪಡೆಯುವವನು, [वा] ವಾ = ಅಥವಾ, [भोगरतः] ಭೋಗರತಃ = ಇಂದ್ರಿಯ ಸುಖದಲ್ಲಿ ಆನಂದಿಸುವವನು, [वा] ವಾ = ಅಥವಾ, [सङ्गरतः] ಸಂಗರತಃ = ಇತರರ ಒಡನಾಟದಲ್ಲಿರಲು ಇಷ್ಟಪಡುವವನು, [वा] ವಾ  = ಅಥವಾ, [सङ्गविहीनः] ಸಂಗವಿಹೀನಃ = ಏಕಾಂಗಿಯಾಗಿರಲು ಇಷ್ಟಪಡುವವನು, [यस्य] ಯಸ್ಯ = ಯಾರ ಬಗ್ಗೆ, [ब्रह्मणि] ಬ್ರಹ್ಮಣಿ = ಬ್ರಹ್ಮನ (ವಾಸ್ತವ), [रमते] ರಮತೇ = ಹರ್ಷಿತರಾಗು(ಆನಂದಪಡು), [चित्तम्] ಚಿತ್ತಮ್ = ಮನಸ್ಸು, [नन्दति] ನಂದತಿ = ಸಂತೋಷಪಡುತ್ತಾರೆ, [नन्दत्येव = नन्दति एव] ನಂದತ್ಯೇವ = ನಿಜವಾಗಿಯೂ ಸಂತೋಷಕರವಾಗಿದೆ.

ಒಬ್ಬರು ಯೋಗಿಯಾಗಿರಲು ಅಥವಾ ಭೋಗಿಯಾಗಿರಲು,
ಅಥವಾ ಇತರರ ಒಡನಾಟದಲ್ಲಿರಲು ಅಥವಾ ಏಕಾಂಗಿಯಾಗಿರಲು ಇಷ್ಟಪಡುವವರಿರಬಹುದು.
ಆದರೆ ಯಾರಿಗೆ ಸದಾ ಬ್ರಹ್ಮನ ಚಿಂತನೆ ಮಾಡುವ ಆಸಕ್ತಿ ಇರುತ್ತದೋ
ಅವರ ಚಿತ್ತವು ಸದಾ ಆನಂದಮಯವಾಗಿರುತ್ತದೆ

20
भगवद्गीता किञ्चिदधीता
गङ्गाजललवकणिका पीता
सकृदपि येन मुरारिसमर्चा
क्रियते तस्य यमेन  चर्चा
ಭಗವದ್ಗೀತಾ ಕಿಂಚಿದಧೀತಾ
ಗಂಗಾಜಲ ಲವ ಕಣಿಕಾ ಪೀತಾ
ಸಕೃದಪಿ ಯೇನ ಮುರಾರಿಸಮರ್ಚಾ
ಕ್ರಿಯತೇ ತಸ್ಯ ಯಮೇನ ಚರ್ಚಾ

[भगवद्गीता] ಭಗವದ್ಗೀತಾ = ಭಗವದ್ಗೀತೆ, [किञ्चित्] ಕಿಂಚಿತ್ = ಸ್ವಲ್ಪ, [अधीता] ಅಧೀತಾ = ಅಧ್ಯನ ಮಾಡಿದ್ದರೆ, [गङ्गाजललव] ಗಂಗಾಜಲ ಲವ = ಗಂಗಾನದಿಯ ನೀರು, [कणिका] ಕಣಿಕಾ = ಒಂದು ಹನಿ, [पीता] ಪೀತಾ = ಕುಡಿದರೆ, [सकृदपि] ಸಕೃದಪಿ = ಕನಿಷ್ಠ ಒಂದು ಬಾರಿಯಾದರೂ, [येन] ಯೇನ = ಯಾರಿಂದ, [मुरारिसमर्चा] ಮುರಾರಿಸಮರ್ಚಾ = ಮುರಾರಿಯ ಆರಾಧನೆ, [क्रियते] ಕ್ರಿಯತೇ = ಮಾಡಿದ್ದರೆ, [तस्य] ತಸ್ಯ = ಅವರಿಗೆ, [यमेन] ಯಮೇನ = ಯಮನೊಂದಿಗೆ, [] = ಇಲ್ಲ, [चर्चा] ಚರ್ಚಾ = ವಿಚಾರಣೆ/ಚರ್ಚೆ.

ಭಗವದ್ಗೀತೆಯನ್ನು ಸ್ವಲ್ಪನೇ ಅಧ್ಯನ ಮಾಡಿದರೂ,
ಗಂಗಾ ನದಿಯ ಒಂದೇ ಒಂದು ಹನಿ ನೀರು ಕುಡಿದರೂ,
ಕನಿಷ್ಠ ಒಂದು ಸಲ ಮುರಾರಿಯನ್ನು ಪೂಜಿಸಿದರೂ ಸಾಕು,
ಅಂಥವನಿಗೆ ಯಮನೊಂದಿಗೂ ಯಾವ ಚರ್ಚೆಯೂ  ಇರುವುದಿಲ್ಲ.

21
पुनरपि जननं पुनरपि मरणम्
पुनरपि जननीजठरे शयनम्
इह संसारे बहुदुस्तारे
कृपयाऽपारे पाहि मुरारे
ಪುನರಪಿ ಜನನಂ ಪುನರಪಿ ಮರಣಮ್
ಪುನರಪಿ ಜನನೀಜಠರೇ ಶಯನಮ್
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾsಪಾರೇ ಪಾಹಿ ಮುರಾರೇ

[पुनरपि = पुनः अपि] ಪುನರಪಿ = ಪುನಃ ಪುನಃ, [जननम्] ಜನನಮ್ = ಜನನ, [पुनरपि] ಪುನರಪಿ = ಪುನಃ ಪುನಃ, [मरणम्] ಮರಣಮ್ = ಮರಣ, [पुनरपि] ಪುನರಪಿ = ಪುನಃ ಪುನಃ, [जननीजठरे] ಜನನೀಜಠರೇ = ತಾಯಿಯ ಗರ್ಭದಲ್ಲಿ, [शयनम्] ಶಯನಮ್ = ಮಲಗುವುದು, [इह] ಇಹ = ಇಲ್ಲಿ, [संसारे] ಸಂಸಾರೇ = ಲೌಕಿಕ ಅಸ್ತಿತ್ವದ ಚಕ್ರ, [बहुदुस्तारे] ಬಹುದುಸ್ತಾರೇ = ತುಂಬಾ ಕಷ್ಟ, [कृपया] ಕೃಪಯಾ = ದಯವಿಟ್ಟು, [अपारे] ಅಪಾರೇ = ಅಪಾರ, [पाहि] ಪಾಹಿ = ರಕ್ಷಿಸು, [मुरारे] ಮುರಾರೇ = ಮುರಾರಿ.

ಪುನಃ ಪುನಃ ಹುಟ್ಟುವುದು ಪುನಃ ಪುನಃ ಸಾಯುವುದು,
ಪುನಃ ಪುನಃ ತಾಯಿಯ ಗರ್ಭದಲ್ಲಿ ಮಲಗುವುದು,
ಮಿತಿ ಇಲ್ಲದ ಸಂಸಾರಚಕ್ರವನ್ನು ದಾಟುವುದು ತುಂಬಾ ಕಷ್ಟ,
ದಯವಿಟ್ಟು ನನ್ನನ್ನು ಇದರಿಂದ ಪಾರುಮಾಡು ಹೇ ಮುರಾರಿ.

22
रथ्याचर्पटविरचितकन्थः
पुण्यापुण्यविवर्जितपन्थः
योगी योगनियोजितचित्तः
रमते बालोन्मत्तवदेव
ರಥ್ಯಾಚರ್ಪಟವಿರಚಿತಕಂಥಃ
ಪುಣ್ಯಾಪುಣ್ಯವಿವರ್ಜಿತಪಂಥಃ
ಯೋಗೀ ಯೋಗನಿಯೋಜಿತ ಚಿತ್ತಃ
ರಮತೇ ಬಾಲೋನ್ಮತ್ತವದೇವ

[रथ्या] ರಥ್ಯಾ = ರಸ್ತೆ, [चर्पट] ಚರ್ಪಟ = ಚಿಂದಿ ಬಟ್ಟೆ, [विरचित] ವಿರಚತ = ಮಾಡಲ್ಪಟ್ಟ, [कन्थः] ಕಂಥಃ = ಹೊದಿಕೆ, [पुण्यः] ಪುಣ್ಯಃ = ಪುಣ್ಯ, [अपुण्यः] ಅಪುಣ್ಯಃ = ಪಾಪ, [विवर्जित] ವಿವರ್ಜಿತ = ನಿಷಿದ್ಧ, [पन्थः] ಪಂಥಃ = ಮಾರ್ಗ, [योगी] ಯೋಗೀ = ಯೋಗಿ, [योगनियोजितचित्तः] ಯೋಗನಿಯೋಜಿತ ಚಿತ್ತಃ = ಲೀನನಾಗಿ ಕೇಂದ್ರೀಕರಿಸಿದ ಮನಸ್ಸು, [रमते] ರಮತೇ = ಆನಂದಿಸುತ್ತಾರೆ, [बालः] ಬಾಲಃ = ಮಗು, [उन्मत्तवत्] ಉನ್ಮತ್ತವತ್ = ಹುಚ್ಚನಂತೆ, [एव] ಏವ = ಹೀಗೆ.

ರಸ್ತೆಯಲ್ಲಿ ಬಿದ್ದಿರುವ ಚಿಂದಿ ಬಟ್ಟೆಗಳಿಂದ ಮಾಡಿದ ಹೊದಿಕೆಯನ್ನು ಹೊದ್ದುಕೊಂಡು,
ಪಾಪ ಪುಣ್ಯಗಳಿಂದ ವಿಮೊಚಿತರಾಗಿ ಮುಂದೆ ಸಾಗುವ,
ತನ್ನ ಮನಸ್ಸಿನಲ್ಲಿ ಲೀನನಾಗಿ ದೇವರೊಂದಿಗೆ ಒಂದಾಗಿರುವ ಯೋಗಿಗಳು
ಶುದ್ಧ ಮತ್ತು ಕಳಂಕರಹಿತ ಆನಂದವನ್ನು ಅನುಭವಿಸುತ್ತಾರೆ, ಒಂದು ಮಗುವಿನಂತೆ ಮತ್ತು ಹುಚ್ಚನಂತೆ.

23
कस्त्वं कोऽहं कुत आयातः
का मे जननी को मे तातः
इति परिभावय सर्वमसारम्
विश्वं त्यक्त्वा स्वप्नविचारम्
ಕಸ್ತ್ವಂ ಕೋsಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ ತಾತಃ
ಇತಿ ಪರಿಭಾವಯ ಸರ್ವಮಸಾರಮ್
ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಮ್

[कः] ಕಃ = ಯಾರು, [त्वम्] ತ್ವಮ್ = ನೀವು, [कः] ಕಃ = ಯಾರು, [अहम्] ಅಹಂ = ನಾನು, [कुत] ಕುತ = ಎಲ್ಲಿಂದ, [आयातः] ಆಯಾತಃ = ಬಂದಿದ್ದೇನೆ, [का] ಕಾ = ಯಾರು, [मे] ಮೇ = ನನ್ನ, [जननी] ಜನನೀ = ತಾಯಿ, [को] ಕೋ = ಯಾರು, [मे] ಮೇ = ನನ್ನ, [तातः] ತಾತಃ = ತಂದೆ, [इति] ಇತಿ = ಹೀಗೆ, [परिभावय] ಪರಿಭಾವಯ = ಆಲೋಚಿಸಿ, [सर्वम्] ಸರ್ವಮ್ = ಎಲ್ಲವೂ, [असारम्] ಅಸಾರಮ್ = ಅರ್ಥಹೀನ, [विश्वम्] ವಿಶ್ವಮ್ = ವಿಶ್ವ, [त्यक्त्वा] ತ್ಯಕ್ತ್ವಾ = ತ್ಯಜಿಸಿ, [स्वप्नविचारम्] ಸ್ವಪ್ನವಿಚಾರಮ್ = ಕನಸಿನ ಯೋಚನೆ.

ನೀವು ಯಾರು? ನಾನು ಯಾರು? ನಾನು ಎಲ್ಲಿಂದ ಬಂದಿದ್ದೇನೆ?
ನನ್ನ ತಾಯಿ ಯಾರು? ನನ್ನ ತಂದೆ ಯಾರು?
ಹೀಗೆ ಚೆನ್ನಾಗಿ ವಿವೇಚಿಸಿ ನೋಡಿ,
ಇಡೀ ವಿಶ್ವದ ಅನುಭವ ನಿಸ್ಸಾರವಾದ ಸ್ವಪ್ನ ಎಂದು ತಿರಸ್ಕರಿಸಿ.

24
त्वयि मयि चान्यत्रैको विष्णुः
र्व्यर्थं कुप्यसि मय्यसहिष्णुः
भव समचित्तः सर्वत्र त्वम्
वाञ्छस्यचिराद्यदि विष्णुत्वम्
ತ್ವಯಿ ಮಯಿ ಚಾನ್ಯತ್ರ್ಯಕೋ ವಿಷ್ಣುಃ
ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ
ಭವ ಸಮಚಿತ್ತಃ ಸರ್ವತ್ರ ತ್ವಮ್
ವಾಛಂಸ್ಯಚಿರಾದ್ಯದಿ ವಿಷ್ಣುತ್ವಮ್

[त्वयि] ತ್ವಯಿ = ನಿಮ್ಮಲ್ಲಿ, [मयि] ಮಯಿ = ನನ್ನಲ್ಲಿ, [चान्यत्रैको = अन्यत्र एकः] - [] = ಮತ್ತು, [अन्यत्र] ಅನ್ಯತ್ರ = ಇತರ ಸ್ಥಳದಲ್ಲಿ, [एकः] ಏಕಃ = ಒಂದು, [विष्णुः] ವಿಷ್ಣುಃ = ವಿಷ್ಣು, [व्यर्थम्] ವ್ಯರ್ಥಮ್ = ಅನಾವಶ್ಯಕ, [कुप्यसि] ಕುಪ್ಯಸಿ = ನೀವು ಕೋಪಗೊಂಡಿದ್ದೀರಿ, [मयि] ಮಯಿ = ನನ್ನ ಮೇಲೆ, [असहिष्णुः] ಅಸಹಿಷ್ಣುಃ = ತಾಳ್ಮೆ ಕಳೆದುಕೊಳ್ಳುವುದು, [भव] ಭವ = ಆಗಿರುತ್ತೆ, [समचित्तः] ಸಮಚಿತ್ತಃ = ಸಮಾನ ಮನೋವೃತ್ತಿ, [सर्वत्र] ಸರ್ವತ್ರ = ಎಲ್ಲೆಡೆ, [त्वम्] ತ್ವಮ್ = ನೀನು, [वाञ्छसि] ವಾಛಸಿ = ನೀವು ಬಯಸುತ್ತೀರಿ, [अचिरात्] ಅಚಿರಾತ್ = ಶೀಘ್ರದಲ್ಲೇ, [यदि] ಯದಿ = ಅದಾದರೆ, [विष्णुत्वम्ವಿಷ್ಣುತ್ವಮ್ = ವಿಷ್ಣುತನ.

ನಿನ್ನಲ್ಲಿ ನನ್ನಲ್ಲಿ ಮತ್ತು ಎಲ್ಲಾ ಕಡೆಯಲ್ಲೂ ಒಂದೇ ಸರ್ವವ್ಯಾಪಿ ವಿಷ್ಣು ಇದ್ದಾನೆ.
ಅನಾವಶ್ಯಕ ನೀನು ಅಸಹನೆಯಿಂದ ನನ್ನ ಮೇಲೆ ಕೋಪಗೊಳ್ಳ ಬೇಡ.
ಯಾವಾಗಲೂ ಎಲ್ಲಾ ಸಂದರ್ಭದಲ್ಲೂ ಸಮಚಿತ್ತದಿಂದಿರ ಬೇಕು
ನಿನಗೆ ಶೀಘ್ರವಾಗಿ ವಿಷ್ಣುಪದ ಸಿಗಬೇಕಾದರೆ.

25
शत्रौ मित्रे पुत्रे बन्धौ
मा कुरु यत्नं विग्रहसन्धौ
सर्वस्मिन्नपि पश्यात्मानम्
सर्वत्रोत्सृज भेदाज्ञानम्
ಶತ್ರೌ ಮಿತ್ರೇ ಪುತ್ರೇ ಬಂಧೌ
ಮಾ ಕುರು ಯತ್ನಂ ವಿಗ್ರಹಸಂಧೌ
ಸರ್ವಸ್ಮಿನ್ನಪಿ ಪಶ್ಯಾತ್ಮಾನಮ್
ಸರ್ವತ್ರೋತ್ಸೃಜ ಭೇದಜ್ಞಾನಮ್

[शत्रौ] ಶತ್ರೌ = ಶತ್ರುಗಳಿಗೆ, [मित्रे] ಮಿತ್ರೇ = ಮಿತ್ರರಿಗೆ, [पुत्रे] ಪುತ್ರೇ = ಮಗನಿಗೆ, [बन्धौ] ಬಂಧೌ = ಬಂಧು ಬಾಂಧವರಿಗೆ, [मा] ಮಾ = ಬೇಡ, [कुरु] ಕುರು = ಮಾಡು, [यत्नम्] ಯತ್ನಮ್ = ಪ್ರಯತ್ನ, [विग्रहसन्धौ] ವಿಗ್ರಹಸಂಧೌ = ವೈಷಮ್ಯ ಅಥವಾ ಸ್ನೇಹ, [सर्वस्मिन्नपि] ಸರ್ವಸ್ಮಿನ್ನಪಿ  = ಎಲ್ಲದರಲ್ಲಿಯೂ ಸಹ, [पश्य] ಪಶ್ಯ = ನೋಡಿ, [आत्मानम्] ಆತ್ಮಾನಮ್ = ಸ್ವಯಂ ಆತ್ಮ, [सर्वत्र] ಸರ್ವತ್ರ = ಎಲ್ಲೆಡೆ, [उत्सृज] ಉತ್ಸೃಜ = ಬಿಟ್ಟುಬಿಡು, [भेद] ಭೇದ = ವೈವಿಧ್ಯತೆ, [अज्ञानम्] ಅಜ್ಞಾನಮ್ = ಅಜ್ಞಾನ.

ಶತ್ರು, ಮಿತ್ರ, ಪುತ್ರ, ಬಂಧುಬಳಗದವರೊಂದಿಗೆ
ತುಂಬಾ ಪ್ರೀತಿ ಅಥವಾ ನಿಷ್ಟೂರ ಮಾಡಿಕೊಳ್ಳಲು ಯತ್ನಿಸ ಬೇಡಿ.
ಎಲ್ಲೆಡೆಯಲ್ಲಿಯೂ ಮತ್ತು ಎಲ್ಲರಲ್ಲಿಯೂ ನಾನೇ ಆತ್ಮನಾಗಿ ಇದ್ದೇನೆ ಎಂದು ತಿಳಿದುಕೊಂಡು
ಎಲ್ಲದರಲ್ಲೂ ಭೇದ ಭಾವವನ್ನು ತೊಡೆದು ಹಾಕಿ.

26
कामं क्रोधं लोभं मोहम्
त्यक्त्वाऽत्मानं पश्यति सोऽहम्
आत्मज्ञानविहीना मूढाः
ते पच्यन्ते नरकनिगूढाः
ಕಾಮಂ ಕ್ರೋಧಂ ಲೋಭಂ ಮೋಹಮ್
ತ್ಯಕ್ತ್ವಾತ್ಮಾನಂ ಪಶ್ಯತಿ ಸೋಹಮ್
ಆತ್ಮಜ್ಞಾನವಿಹೀನಾ ಮೂಢಾಃ
ತೇ ಪಚ್ಯಂತೇ ನರಕನಿಗೂಢಾಃ

[कामम्] ಕಾಮಮ್ = ಆಸೆ, [क्रोधम्] ಕ್ರೋಧಮ್ = ಕೋಪ, [लोभम्] ಲೋಭಮ್ = ದುರಾಸೆ, [मोहम्] ಮೋಹಮ್ = ಭ್ರಮೆ, [त्यक्त्वा] ತ್ಯಕ್ತ್ವಾ = ಬಿಟ್ಟುಬಿಟ್ಟರೆ, [आत्मानम्] ಆತ್ಮಾನಮ್ = ಸ್ವಯಂ ಆತ್ಮ, [पश्यति] ಪಶ್ಯತಿ = ನೋಡುತ್ತದೆ, [सोऽहम्] = (सः अहम्) ಸೋಹಮ್ = ನಾನೂ ಅದೇನೆ , [आत्मज्ञान] ಆತ್ಮಜ್ಞಾನ = ಸ್ವಯಂ-ಜ್ಞಾನ, [विहीनः] ವಿಹೀನಃ = ವಂಚಿತ, [मूढाः] ಮೂಢಾಃ = ಮೂರ್ಖರು, [ते] ತೇ = ಅವರು, [पच्यन्ते] ಪಚ್ಯಂತೇ = ಚಿತ್ರಹಿಂಸೆಗೆ ಒಳಗಾಗುತ್ತಾರೆ, [नरकनिगूढाः] ನರಕನಿಗೂಢಾಃ = ನರಕದಲ್ಲಿ ಬಂಧಿತರಾಗಿ.

ಕಾಮ, ಕ್ರೋಧ, ಲೋಭ, ಮೋಹಗಳನ್ನು
ತೊಡೆದು ಹಾಕಿದರೆ ಎಲ್ಲೆಡೆಯಲ್ಲಿಯೂ ಮತ್ತು ತನ್ನಲ್ಲಿಯೂ ಇರುವ ಆತ್ಮನೊಬ್ಬನೇ ಎಂದರಿವಾಗುತ್ತದೆ.
ಆತ್ಮಜ್ಞಾನ ಪಡೆಯದೇ ಇರುವ ಮೂಢರು
ನರಕದ ಬಂಧನಕ್ಕೊಳಕ್ಕಾಗಿ ನರಳುತ್ತಾರೆ.

27
गेयं गीतानामसहस्रम्
ध्येयं श्रीपतिरूपमजस्रम्
नेयं सज्जनसङ्गे चित्तम्
देयं दीनजनाय वित्तम्
ಗೇಯಂ ಗೀತಾನಾಮಸಹಸ್ರಮ್
ಧ್ಯೇಯಂ ಶ್ರೀಪತಿರೂಪಮಜಸ್ರಮ್
ನೇಯಂ ಸಜ್ಜನಸಂಗೇ ಚಿತ್ತಮ್
ದೇಯಂ ದೀನಜನಾಯ ವಿತ್ತಮ್

[गेयम्] ಗೇಯಮ್ = ಪಠಿಸಬೇಕು, [गीता] ಗೀತಾ = ಭಗವದ್ಗೀತೆ, [नामसहस्रम्] ನಾಮಸಹಸ್ರಮ್ = ಸಹಸ್ರನಾಮ, [ध्येयम्] ಧ್ಯೇಯಮ್ = ಧ್ಯಾನ ಮಾಡ ಬೇಕು, [श्रीपतिरूपम्] ಶ್ರೀಪತಿರೂಪಮ್ = ಶ್ರೀಪತಿಯ ರೂಪ, [अजस्रम्] ಜಸ್ರಮ್ = ಸದಾ, [नेयम्] ನೇಯಮ್ = ವಿನಿಯೋಗಿಸಬೇಕು, [सज्जनसङ्गे] ಸಜ್ಜನಸಂಗೇ = ಒಳ್ಳೆಯ ಜನರ ಸಹವಾಸದಲ್ಲಿ, [चित्तम्] ಚಿತ್ತಮ್ = ಮನಸ್ಸು, [देयम्] ದೇಯಮ್ = ಕೊಡಬೇಕು, [दीनजनाय] ದೀನಜನಾಯ = ಬಡ ಜನರಿಗೆ, [] = ಮತ್ತು, [वित्तम्] ವಿತ್ತಮ್ = ಧನ ಸಂಪತ್ತು.

ಭಗವದ್ಗೀತೆ ಮತ್ತು ಭಗವಂತನ ಸಹಸ್ರ ನಾಮವನ್ನು ಪಠಿಸುತ್ತಿರಿ,
ನಿತ್ಯ ಶ್ರೀಪತಿಯ ದಿವ್ಯ ರೂಪವನ್ನು ಧ್ಯಾನಿಸುತ್ತಿರಿ,
ಸಜ್ಜನರ ಸಹವಾಸದಲ್ಲಿರಲು ಮನಸ್ಸನ್ನು ಪ್ರೇರೇಪಿಸಿಕೊಳ್ಳಿ,
ಮತ್ತು ಬಡ ನಿರ್ಗತಿಕರಿಗೆ ದಾನ ಮಾಡಿ.

28
सुखतः क्रियते रामाभोगः
पश्चाद्धन्त शरीरे रोगः
यद्यपि लोके मरणं शरणम्
तदपि मुञ्चति पापाचरणम्
ಸುಖತಃ ಕ್ರಿಯತೇ ರಾಮಾಭೋಗಃ
ಪಶ್ಚಾದ್ಧಂತ ಶರೀರೇ ರೋಗಃ
ಯದ್ಯಪಿ ಲೋಕೇ ಮರಣಂ ಶರಣಮ್
ತದಪಿ ಮುಂಚತಿ ಪಾಪಾಚರಣಮ್

[सुखतः] ಸುಖತಃ = ಸುಖಪಡುವುದಕ್ಕಾಗಿ, [क्रियते] ಕ್ರಿಯತೇ = ಮಾಡುತ್ತಾರೆ, [रामाभोगः] ರಾಮಾಭೋಗಃ = ಶಾರೀರಿಕ ಸುಖಗಳು, [पश्चात्] ಪಶ್ಚಾತ್ = ಆ ನಂತರ, [हन्तः] ಹಂತಃ  = ಅಯ್ಯೋ, [शरीरे] ಶರೀರೇ  = ದೇಹದಲ್ಲಿ, [रोगः] ರೋಗಃ = ರೋಗ, [यद्यपि] ಯದ್ಯಪಿ = ಆದರೂ, [लोके] ಲೋಕೇ = ಜಗತ್ತಿನಲ್ಲಿ, [मरणम्] ಮರಣಮ್ = ಮರಣ, [शरणम्] ಶರಣಮ್ = ಆಶ್ರಯ, [तदपि] ತದಪಿ = ಆದಾಗ್ಯೂ, [] = ಇಲ್ಲ, [मुञ्चति] ಮುಂಚತಿ = ಮುಕ್ತಗೊಳ್ಳುವುದು, [पापाचरणम्] ಪಾಪಾಚರಣಮ್ = ಪಾಪದ ನಡತೆ.

ಸುಖಪಡುವ ಆಸೆಯಿಂದ ವೇಶ್ಯಾ ಸಹವಾಸ ಮಾಡುತ್ತಾರೆ,
ಆಮೇಲೆ ಶರೀರ ರೋಗಕ್ಕೀಡಾಗುತ್ತದೆ.
ಕೊನೆಯಲ್ಲಿ ಲೋಕದಲ್ಲಿ ಎಲ್ಲರಿಗೂ ಮರಣವೇ ಗತಿಯಾದರೂ
ಪಾಪದ ಕಾರ್ಯ ಮಾಡುವುದನ್ನು ಮಾತ್ರ ಬಿಡುವುದಿಲ್ಲ.

29
अर्थमनर्थं भावय नित्यम्
नास्तिततः सुखलेशः सत्यम्
पुत्रादपि धनभाजां भीतिः
सर्वत्रैषा विहिता रीतिः
ಅರ್ಥಮನರ್ಥಂ ಭಾವಯ ನಿತ್ಯಮ್
ನಾಸ್ತಿ ತತಃ ಸುಖಲೇಶಃ ಸತ್ಯಮ್
ಪುತ್ರಾದಪಿ ಧನಭಾಜಾಂ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ

[अर्थम्] ಅರ್ಥಮ್ = ಸಂಪತ್ತು, [अनर्थम्] ಅನರ್ಥಮ್ = ತೊಂದರೆ/ದುಃಖ, [भावय] ಭಾವಯ = ಆಲೋಚನೆ ಮಾಡು, [नित्यम्] ನಿತ್ಯಮ್ = ಯಾವಾಗಲೂ, [नास्ति] ನಾಸ್ತಿ = ಇಲ್ಲ, [ततः] ತತಃ = ಅದರಿಂದ, [सुखलेशः] ಸುಖಲೇಶಃ = ಸ್ವಲ್ಪನೂ ಸುಖ, [सत्यम्] ಸತ್ಯಮ್ = ಸತ್ಯ, [पुत्रादपि] ಪುತ್ರಾದಪಿ = ಸ್ವಂತ ಮಗನಿಂದ ಕೂಡ, [धनभाजां] ಧನಭಾಜಾಂ = ಶ್ರೀಮಂತರಿಗೆ, [भीतिः] ಭೀತಿಃ = ಭಯ, [सर्वत्र] ಸರ್ವತ್ರ = ಎಲ್ಲೆಡೆ, [एषा] ಏಷಾ = ಇದು, [विहिता] ವಿಹಿತಾ = ಪ್ರಚಲಿತ, [रीतिः] ರೀತಿಃ = ವಿಧಾನ.

ಸಂಪತ್ತಿನಿಂದ ತೊಂದರೆಗಳು ಜಾಸ್ತಿ ಎಂದು ಸದಾ ಭಾವಿಸು,
ನಿಜವಾಗಿ ಅದರಲ್ಲಿ ಸ್ವಲ್ಪನೂ ಸುಖ ಸಂತೋಷ ಇರುವುದಿಲ್ಲ.
ಶ್ರೀಮಂತರಿಗೆ ತಮ್ಮ ಮಗನಿಂದಲೂ ತೊಂದರೆ ಆಗಬಹುದೆಂಬ ಭಯ,
ಎಲ್ಲ ಕಡೆಯಲ್ಲೂ ಸಾಮಾನ್ಯ ಇದೇ  ರೀತಿ ಇರುವುದು.

30
प्राणायामं प्रत्याहारम्
नित्यानित्य विवेकविचारम्
जाप्यसमेतसमाधिविधानम्
कुर्ववधानं महदवधानम्
ಪ್ರಾಣಾಯಾಮಂ ಪ್ರತ್ಯಾಹಾರಮ್
ನಿತ್ಯಾನಿತ್ಯವಿವೇಕವಿಚಾರಮ್
ಜಾಪ್ಯಸಮೇತ ಸಮಾಧಿವಿಧಾನಮ್
ಕುರ್ವವಧಾನಂ ಮಹದವಧಾನಮ್

[प्रानायमम्] ಪ್ರಾಣಾಯಾಮಮ್ = ಪ್ರಾಣಾಯಾಮ, [प्रत्याहारम्] ಪ್ರತ್ಯಾಹಾರಮ್ = ಪ್ರತ್ಯಾಹಾರ, [नित्य] ನಿತ್ಯ = ಶಾಶ್ವತ, [अनित्य] ಅನಿತ್ಯ = ಅಶಾಶ್ವತ, [विवेकविचारम्] ವಿವೇಕವಿಚಾರಮ್ = ವಿವೇಕದ ಪರಾಮರ್ಶೆ, [जाप्यसमेत] ಜಾಪ್ಯಸಮೇತ = ಜಪ ಮಾಡುವ ಅಭ್ಯಾಸ ಮತ್ತು, [समाधिविधानम्] ಸಮಾಧಿವಿಧಾನಮ್ = ಧ್ಯಾನದ ವಿಧಾನ, [कुरु] ಕುರು = ಮಾಡಿ, [अवधानम्] ವಧಾನಮ್ = ಗಮನವಿಟ್ಟು, [महत् अवधानम्] ಮಹತ್ ಅವಧಾನಮ್ = ತುಂಬಾ ಗಮನವಿಟ್ಟು.

ಪ್ರಾಣಾಯಾಮ, ಪ್ರತ್ಯಾಹಾರ,
ನಿತ್ಯ ಮತ್ತು ಅನಿತ್ಯ ವಸ್ತುಗಳ ಕುರಿತು ವಿವೇಕದಿಂದ ವಿಚಾರ ಮಾಡಿ,
ಜಪ ಮತ್ತು ಧ್ಯಾನದ ಅಭ್ಯಾಸ ಮಾಡಿ
ತುಂಬ ಎಚ್ಚರಿಕೆ ಮತ್ತು ಜಾಗ್ರತೆಯಿಂದ.

31
गुरुचरणाम्बुजनिर्भरभक्तः
संसारादचिराद्भव मुक्तः
सेन्द्रियमानसनियमादेवम्
द्रक्ष्यसि निजहृदयस्थं देवम्
ಗುರುಚರಣಾಂಬುಜನಿರ್ಭರಭಕ್ತಃ
ಸಂಸಾರಾದಚಿರಾದ್ಭವ ಮುಕ್ತಃ
ಸೇಂದ್ರಿಯಮಾನಸನಿಯಮಾದೇವಮ್
ದ್ರಕ್ಷ್ಯಸಿ ನಿಜಹೃದಯಸ್ಥಂ ದೇವಮ್

[गुरुचरणाम्बुजनिर्भरभक्तः] ಗುರುಚರಣಾಂಬುಜನಿರ್ಭರಭಕ್ತಃ = ಗುರುವಿನ ಪಾದಕಮಲಗಳಿಗೆ ಸಮರ್ಪಿತನಾದವನು, [संसारात्] ಸಂಸಾರಾತ್ = ಪ್ರಪಂಚದಿಂದ, [अचिरात्] ಅಚಿರಾತ್ = ಶೀಘ್ರದಲ್ಲೇ, [भव मुक्तः] ಭವ ಮುಕ್ತಃ = ನೀವು ಮುಕ್ತರಾಗಿ, [सेन्द्रियमानसनियमात्] ಸೇಂದ್ರಿಯಮಾನಸನಿಯಮಾತ್ = ಇಂದ್ರಿಯಗಳು ಮತ್ತು ಮನಸ್ಸಿನ ನಿಯಂತ್ರಣದಿಂದ, [एवम्] ಏವಮ್ = ಈ ರೀತಿಯಲ್ಲಿ, [द्रक्ष्यसि] ದ್ರಕ್ಷ್ಯಸಿ = ನೀವು ನೋಡುವಿರಿ/ ಅನುಭವಿಸುವಿರಿ, [निजहृदयस्थं] ನಿಜಹೃದಯಸ್ಥಂ = ನಿಮ್ಮ ಹೃದಯದಲ್ಲಿ ನೆಲೆಸಿರುವ, [देवम्] ದೇವಮ್ = ದೇವರು.

ಗುರುವಿನ ಪಾದಕಮಲದಲ್ಲಿ ದೃಢ ಭಕ್ತಿಯುಳ್ಳವನು
ಲೌಕಿಕ ಜೀವನದ ಬಂಧನದಿಂದ ಶೀಘ್ರವಾಗಿ ಬಿಡುಗಡೆ ಹೊಂದುವನು.
ಇಂದ್ರಿಯಗಳು ಮತ್ತು ಮನಸ್ಸಿನ ಶಿಸ್ತುಬದ್ಧ ನಿಯಂತ್ರಣದ ಮೂಲಕ,
ನಿಮ್ಮ ಹೃದಯದ್ಲಲಿರುವ ಭಗವಂತನನ್ನು ಅನುಭವಿಸಿರಿ.






No comments:

Post a Comment