ಭಜ ಗೋವಿಂದಂ ಕನ್ನಡದಲ್ಲಿ ಭಾವಾರ್ಥ ಸಹಿತ

  मोहमुद्गर स्तोत्रम्
भज गोविन्दम्

ಮೋಹಮುದ್ಗರ ಸ್ತೋತ್ರಮ್
ಭಜ ಗೋವಿಂದಮ್

01
भज गोविन्दं भज गोविन्दम्
गोविन्दं भज मूढमते
सम्प्राप्ते सन्निहिते काले
नहि नहि रक्षति डुकृङ्करणे
ಭಜ ಗೋವಿಂದಂ ಭಜ ಗೋವಿಂದಮ್
ಗೋವಿಂದಂ ಭಜ ಮೂಢಮತೇ
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ಹಿ ಹಿ ರಕ್ಷತಿ ಡುಕುರುಞ್ ಕರಣೇ
 
ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು,
ಗೋವಿಂದನನ್ನು ಭಜಿಸು, ಎಲೈ ಮೂಢ;
ಅಂತ್ಯ ಕಾಲವು ಸಮೀಪಿಸಿರುವಾಗ
ವ್ಯಾಕರಣ ಶಾಸ್ತ್ರವು ನಿನ್ನನ್ನು ರಕ್ಷಿಸುವುದಿಲ್ಲ.

02
मूढ जहीहि धनागमतृष्णाम्
कुरु सद्बुद्धिं मनसि वितृष्णाम्
यल्लभसे निजकर्मोपात्तम्
वित्तं तेन विनोदय चित्तम्
ಮೂಢ ಜಹೀಹಿ ಧನಾಗಮತೃಷ್ಣಾಮ್
ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್
ಯಲ್ಲಭಸೇ ನಿಜಕರ್ಮೋಪಾತ್ತಮ್
ವಿತ್ತಂ ತೇನ ವಿನೋದಯ ಚಿತ್ತಮ್
 
ಎಲೈ ಮೂಢ, ಹಣ ಸಂಪತ್ತು ಬರಬೇಕೆಂಬ ಆಸೆ ಬಿಟ್ಟುಬಿಡು.
ಮನಸ್ಸಿನಲ್ಲಿರುವ ಅನಾವಶ್ಯಕ ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡಬೇಕೆಂಬ ಬುದ್ಧಿ ಬೆಳೆಸು.
ನಿನ್ನ ಕರ್ಮಫಲಕ್ಕನುಗುಣವಾಗಿ
ಎಷ್ಟು ಸಂಪತ್ತು ದೊರೆಯುತ್ತದೆಯೋ ಅಷ್ಟರಲ್ಲಿ ಮನಸ್ಸಿಗೆ ತೃಪ್ತಿ ತಂದುಕೊಳ್ಳು.
 
03
नारीस्तनभरनाभीदेशम्
दृष्ट्वा मा गा मोहावेशम्
एतन्मांसवसादिविकारम्
मनसि विचिन्तय वारं वारम्
ನಾರೀ ಸ್ತನಭರನಾಭೀದೇಶಮ್
ದೃಷ್ಟ್ವಾಮಾ ಗಾ ಮೋಹಾವೇಶಮ್
ಏತನ್ಮಾಂಸವಸಾದಿವಿಕಾರಮ್
ಮನಸಿ ವಿಚಿಂತಯ ವಾರಂ ವಾರಮ್
 
ಸ್ತೀಯರ ಸ್ತನಗಳನ್ನು ಮತ್ತು ಹೊಕ್ಕುಳನ್ನು
ನೋಡಿ ಮೋಹಕ್ಕೊಳಗಾಗ ಬೇಡಿ,
ಇವು ಕಾಲಿ ಮಾಂಸ ಮತ್ತು ಕೊಬ್ಬು ಮಾರ್ಪಾಡಾದ ವಿಕಾರ.
ಇದನ್ನು ನಿಮ್ಮ ಮನಸ್ಸಿನಲ್ಲಿ ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಿ.
 
04
नलिनीदलगतजलमतितरलम्
तद्वज्जीवितमतिशयचपलम्
विद्धि व्याध्यभिमानग्रस्तम्
लोकं शोकहतं  समस्तम्
ನಲಿನೀದಲಗತಜಲಮತಿತರಲಮ್
ತದ್ವಜ್ಜೀವಿತಮತಿಶಯಚಪಲಮ್
ವಿದ್ಧಿ ವ್ಯಾಧ್ಯಭಿಮಾನಗ್ರಸ್ತಮ್
ಲೋಕಂ ಶೋಕಹತಂ ಸಮಸ್ತಮ್

ತಾವರೆಗಿಡದ ಎಲೆಯ ಮೇಲೆ ಬಿದ್ದ ನೀರಿನ  ಹನಿ ಅಸ್ಥಿರ,
ಹಾಗೇನೇ ಮನುಷ್ಯನ ಜೀವನವು ಅತ್ಯಂತ ಚಂಚಲ ಮತ್ತು ಅಸ್ಥಿರ.
ರೋಗರುಜಿನ ಮತ್ತು ದುರಂಹಕಾರಗಳಿಂದ ತುಂಬಿಕೊಂಡು
ಲೋಕದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ದುಃಖ್ಖದಿಂದ ನರಳುತ್ತಿದ್ದಾರೆ.
 
05
यावद्वित्तोपार्जनसक्तः
स्तावन्निजपरिवारो रक्तः
पश्चाज्जीवति जर्जरदेहे
वार्तां कोऽपि  पृच्छति गेहे
ಯಾವದ್ವಿತ್ತೋಪಾರ್ಜನಸಕ್ತಃ
ಸ್ತಾವನ್ನಿಜಪರಿವಾರೋ ರಕ್ತಃ
ಪಶ್ಚಾಜ್ಜೀವತಿ ಜರ್ಜರದೇಹೇ
ವಾರ್ತಾಂ ಕೋsಪಿ ಪೃಚ್ಛತಿ ಗೇಹೇ

ಒಬ್ಬ ಸಂಪಾದನೆ ಮಾಡಿ ಕುಟುಂಬವನ್ನು ಪೋಷಿಸಲು ಸಮರ್ಥನಾಗಿರುವವರೆಗೆ
ಅವನ ಬಂಧುಗಳು ಅವನನ್ನು ಪ್ರೀತಿಯಿಂದ ಆದರಿಸುತ್ತಾರೆ.
ಆದರೆ ಮುದಿತನದಲ್ಲಿ ದೇಹ ಬಲಹೀನವಾದಾಗ
ಮನೆಯಲ್ಲಿ ಯಾರೂ ವಿಚಾರಿಸಲು ಬರುವುದಿಲ್ಲ.

06
यावत्पवनो निवसति देहे
तावत्पृच्छति कुशलं गेहे
गतवति वायौ देहापाये
भार्या बिभ्यति तस्मिन्काये
ಯಾವತ್ಪವನೋ ನಿವಸತಿ ದೇಹೇ
ತಾವತ್ಪೃಚ್ಛತಿ ಕುಶಲಂ ಗೇಹೇ
ಗತವತಿ ವಾಯೌ ದೇಹಾಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ

ಎಲ್ಲಿಯವರೆಗೆ ದೇಹದಲ್ಲಿ ಪ್ರಾಣವಿರುತ್ತದೋ
ಅಲ್ಲಿಯವರೆಗೆ ಎಲ್ಲರೂ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿರುತ್ತಾರೆ.
ಆದರೆ ದೇಹದಿಂದ ಪ್ರಾಣವಾಯು ಹೊರಟು ಹೋದ ಮೇಲೆ
ಹೆಂಡತಿಯೂ ಕೂಡ ಹೆಣದ ಹತ್ತಿರ ಬರಲು ಭಯಪಡುತ್ತಾಳೆ.

 07
बालस्तावत्क्रीडासक्तः
तरुणस्तावत्तरुणीसक्तः
वृद्धस्तावच्चिन्तासक्तः
परमे ब्रह्मणि कोऽपि  सक्तः
 ಬಾಲಸ್ತಾವತ್ಕ್ರೀಡಾಸಕ್ತಃ
ತರುಣಸ್ತಾವತ್ತರುಣೀಸಕ್ತಃ
ವೃದ್ಧಸ್ತಾವತ್ಚಿಂತಾಸಕ್ತಃ
ಪರಮೇ ಬ್ರಹ್ಮಣಿ ಕೋsಪಿ ಸಕ್ತಃ

ಬಾಲ್ಯಾವಸ್ಥೆಯಲ್ಲಿ ಆಟದ ಮೇಲೆ ಆಸಕ್ತಿ,
ತರುಣಾವಸ್ಥೆಯಲ್ಲಿ ತರುಣಿಯರ ಮೇಲೆ ಆಸಕ್ತಿ,
ವೃದ್ಧಾಪ್ಯದಲ್ಲಿ ಅನೇಕ ವಿಷಯಗಳ ಚಿಂತೆ,
ಆದರೆ ಪರಬ್ರಹ್ಮನ ಯೋಚನೆ ಮಾಡಲು ಆಗುತ್ತಿಲ್ಲ.

 08
का ते कान्ता कस्ते पुत्रः
संसारोऽयमतीव विचित्रः
कस्य त्वं कः कुत आयातः
तत्त्वं चिन्तय तदिह भ्रातः
ಕಾ ತೇ ಕಾಂತಾ ಕಸ್ತೇ ಪುತ್ರಃ
ಸಂಸಾರೋsಯಮತೀವ ವಿಚಿತ್ರಃ
ಕಸ್ಯ ತ್ವಂ ಕಃ ಕುತ ಆಯಾತಃ
ತತ್ತ್ವಂ ಚಿಂತಯ ತದಿಹ ಭ್ರಾತಃ

ನಿನ್ನ ಹೆಂಡತಿ ಯಾರು? ನಿನ್ನ ಮಗ ಯಾರು?
ಸಂಸಾರವು ತುಂಬ ವಿಚಿತ್ರವಾದದ್ದು,
ನೀನು ಯಾರು? ಇಲ್ಲಿಗೆ ಎಲ್ಲಿಂದ ಬಂದಿರುವೆ?
ಇವುಗಳ ಸತ್ಯ ಸಂಗತಿ ಏನೆಂಬುದನ್ನು ಯೋಚಿಸು ತಮ್ಮ.

09
सत्सङ्गत्वे निस्सङ्गत्वम्
निस्सङ्गत्वे निर्मोहत्वम्
निर्मोहत्वे निश्चलतत्त्वम्
निश्चलतत्त्वे जीवन्मुक्तिः
ಸತ್ಸಂಗತ್ವೇ ನಿಸ್ಸಂಗತ್ವಮ್
ನಿಸ್ಸಂಗತ್ವೇ ನಿರ್ಮೋಹತ್ವಮ್
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ

ಸಜ್ಜನರ ಸಹವಾಸದಿಂದ ಅನಾವಶ್ಯ ಆಸಕ್ತಿಗಳಿಂದ ಮುಕ್ತನಾಗ ಬಹುದು,
ಅನಾವಶ್ಯ ಆಸಕ್ತಿಗಳಿಂದ ಮುಕ್ತನಾದರೆ ದುರಾಸೆ ಮತ್ತು ಮೋಹವು ನಾಶವಾಗುತ್ತದೆ,
ಮೋಹದಿಂದ ಮುಕ್ತನಾದರೆ ಶಾಶ್ವತ ಸತ್ಯದ ಜ್ಞಾನವಾಗುತ್ತದೆ,
ಸತ್ಯದ ಜ್ಞಾನದಿಂದ ಜೀವನ್ಮುಕ್ತಿ ಪ್ರಾಪ್ತಿಯಾಗುವುದು.

10
वयसि गते कः कामविकारः
शुष्के नीरे कः कासारः
क्षीणे वित्ते कः परिवारः
ज्ञाते तत्त्वे कः संसारः
ವಯಸಿ ಗತೇ ಕಃ ಕಾಮವಿಕಾರಃ
ಶುಷ್ಕೇ ನೀರೇ ಕಃ ಕಾಸಾರಃ
ಕ್ಷೀಣೇ ವಿತ್ತೇ ಕಃ ಪರಿವಾರಃ
ಜ್ಞಾತೇ ತತ್ತ್ವೇ ಕಃ ಸಂಸಾರಃ

ವಯಸ್ಸು ಕಳೆದು ಹೋದ ಮೇಲೆ ಕಾಮವಿಕಾರವೆಲ್ಲಿರುತ್ತದೆ?
ನೀರು ಒಣಗಿ ಹೊದ ಮೇಲೆ ಕೆರೆಯೆಲ್ಲಿರುತ್ತದೆ?
ಸಂಪತ್ತು ಇಲ್ಲವಾದಾಗ ಪರಿವಾರದವರೆಲ್ಲಿರುತ್ತಾರೆ?
ತತ್ತ್ವಜ್ಞಾನವಾದಾಗ ಸಂಸಾರ ಎಲ್ಲಿದ್ದೀತು?

11
मा कुरु धनजनयौवनगर्वम्
हरति निमेषात्कालः सर्वम्
मायामयमिदमखिलं बुध्वा
ब्रह्मपदं त्वं प्रविश विदित्वा
ಮಾ ಕುರು ಧನಜನಯೌವನಗರ್ವಮ್
ಹರತಿ ನಿಮೇಷಾತ್ಕಾಲಃ ಸರ್ವಮ್
ಮಾಯಾಮಯಮಿದಮಖಿಲಂ ಬುಧ್ವಾ
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ

ಸಂಪತ್ತು, ಜನಬಲ, ಯವ್ವನ ಇದೆ ಎಂದು ಹೆಮ್ಮೆಪಡ ಬೇಡಿ.
ಇವೆಲ್ಲವೂ ಒಂದೇ ನಿಮಿಷದಲ್ಲಿ ಕಳೆದುಹೋಗ ಬಹುದು.
ಇವೆಲ್ಲ ಅಶಾಶ್ವತ ಮಾಯಾಲೋಕದ ಭ್ರಮೆ ಎಂಬ ಅರಿವು ಆದ ಮೇಲೆ
ನೀವು ಬ್ರಹ್ಮಪದದ ಪ್ರವೇಶ ಮಾಡುವುರಿ.

12
दिनयामिन्यौ सायं प्रातः
शिशिरवसन्तौ पुनरायातः
कालः क्रीडति गच्छत्यायुः
तदपि  मुञ्चत्याशावायुः
ದಿನಯಾಮಿನ್ಯೌ ಸಾಯಂ ಪ್ರಾತಃ
ಶಿಶಿರವಸಂತೌ ಪುನರಾಯಾತಃ
ಕಾಲಃಕ್ರೀಡತಿ ಗಚ್ಛತ್ಯಾಯುಃ
ತದಪಿ ಮುಂಚತ್ಯಾಶಾವಯುಃ

ಹಗಲು ಮತ್ತು ರಾತ್ರಿ, ಸಂಜೆ ಮತ್ತು ಪ್ರಾತಃಕಾಲ
ಚಳಿಗಾಲ ಮತ್ತು ವಸಂತಋತು ಮುಂತಾದವೆಲ್ಲವೂ ಪುನಃ ಪುನಃ ಬಂದು ಹೊಗುತ್ತವೆ,
ಇದು ಸಮಯದ ಆಟ, ಇದರಲ್ಲಿ ಮನುಷ್ಯನ ಆಯಸ್ಸು ಕಳೆದುಹೋಗುತ್ತದೆ.
ಇದೆಲ್ಲ ತಿಳಿದಿದ್ದರೂ ಆಸೆಯ ಬಿರುಗಾಳಿ ಬಿಟ್ಟು ಹೋಗುವುದಿಲ್ಲ.

13
का ते कान्ता धनगतचिन्ता
वातुल किं तव नास्ति नियन्ता
त्रिजगति सज्जनसङ्गतिरेका
भवति भवार्णवतरणे नौका
ಕಾ ತೇ ಕಾಂತಾ ಧನಗತಚಿಂತಾ
ವಾತುಲ ಕಿಂ ತವ ನಾಸ್ತಿ ನಿಯಂತಾ
ತ್ರಿಜಗತಿ ಸಜ್ಜನಸಂಗತಿರೇಕಾ
ಭವತಿ ಭವಾರ್ಣವತರಣೇ ನೌಕಾ

ನಿನಗೆ ಹೆಂಡತಿ ಮತ್ತು ಸಂಪತ್ತಿನ ಚಿಂತೆ ಯಾಕೆ?
ನಿನಗೆ ಬುದ್ದಿ ಹೇಳಿ ದಾರಿ ತೋರಿಸುವವರು ಯಾರೂ ಇಲ್ಲವೆ?
ಮೂರು ಲೋಕಗಳಲ್ಲಿಯೂ ಸತ್ಸಂಗವೆಂಬುದೊಂದೇ
ಸಂಸಾರಸಾಗರವನ್ನು ದಾಟಿಸಬಲ್ಲ ದೋಣಿಯಾಗಿರುತ್ತದೆ.

14
जटिलो मुण्डी लुञ्छितकेशः
काषायाम्बरबहुकृतवेषः
पश्यन्नपि   पश्यति मूढः
उदरनिमित्तं बहुकृतवेषः
ಜಟಿಲೋ ಮುಂಡೀ ಲುಂಚಿತಕೇಶಃ
ಕಾಷಾಯಾಂಬರಬಹುಕೃತ ವೇಷಃ
ಪಶ್ಯನ್ನಪಿ ಪಶ್ಯತಿ ಮೂಢಃ
ಉದರನಿಮಿತ್ತಂ ಬಹುಕೃತವೇಷಃ

ಕೆಲವರು ಜಡೆ ಬಿಟ್ಟವರು, ಇನ್ನು ಕೆಲವರು ತಲೆ ಬೋಳಿಸಿಕೊಂಡವರು,
ಮತ್ತೆ ಕೆಲವರು ಕೂದಲು ಚಲ್ಲಾಪಿಲ್ಲಿ ಬಿಟ್ಟವರು, ಕಾವಿ ಬಟ್ಟೆ ಉಟ್ಟವರು ಹಾಗೂ ಬೇರೆ ಬೇರೆ ಅಲಂಕಾರದ ವೇಷದವರು ಇದ್ದಾರೆ.
ಕಣ್ಣಿಗೆ ಕಾಣುತ್ತಿದ್ದರೂ ಸತ್ಯವನ್ನು ಕಾಣಲಾರದ ಇಂತಹ ಮೂಢರಿದ್ದಾರೆ.
ಹೊಟ್ಟೆಪಾಡಿಗಾಗಿ ನಾನಾ ವೇಷವನ್ನು ಧರಿಸಿರುತ್ತಾರೆ.

15
अङ्गं गलितं पलितं मुण्डम्
दशनविहीनं जातं तुण्डम्
वृद्धो याति गृहीत्वा दण्डम्
तदपि  मुञ्चत्याशापिण्डम्
ಅಂಗಂ ಗಲಿತಂ ಪಲಿತಂ ಮುಂಡಮ್
ದಶನವಿಹೀನಂ ಜಾತಂ ತುಂಡಮ್
ವೃದ್ಧೋ ಯಾತಿ ಗೃಹೀತ್ವಾ ದಂಡಮ್
ತದಪಿ ಮುಂಚತ್ಯಾಶಾಪಿಂಡಮ್

ವಯಸ್ಸಾದ ಮೇಲೆ ಅಂಗಾಂಗಗಳು ಬಲಹೀನವಾಗುತ್ತವೆ, ತಲೆಕೂದಲು ನೆರೆತು ಬೆಳ್ಳಗಾಗಿರುತ್ತದೆ.
ಬಾಯಿಯಲ್ಲಿದ್ದ ಹಲ್ಲುಗಳೆಲ್ಲ ಉದುರಿಹೋಗಿರುತ್ತವೆ.
ಮುದುಕನು ದೊಣ್ಣೆ ಹಿಡಿದು ನಡೆಯ ಬೇಕಾಗುತ್ತದೆ.
ಇಷ್ಟಾದರೂ ಆಶೆಗಳ ಕಂತೆ ಬಿಟ್ಟು ಹೋಗುವುದಿಲ್ಲ.

16
अग्रे वह्निः पृष्ठे भानुः
रात्रौ चुबुकसमर्पितजानुः
करतलभिक्षस्तरुतलवासः
तदपि  मुञ्चत्याशापाशः
ಅಗ್ರೇ ವಹ್ನಿಃ ಪೃಷ್ಠೇ ಭಾನುಃ
ರಾತ್ರೌ ಚುಬುಕಸಮರ್ಪಿತಜಾನುಃ
ಕರತಲಭಿಕ್ಷಸ್ತರುತಲವಾಸಃ
ತದಪಿ ಮುಂಚತ್ಯಾಶಾಪಾಶಃ

ಚಳಿಯಲ್ಲಿ ಮುಂದೆ ಬೆಂಕಿಯಿಂದ ಮತ್ತು ಹಿಂದೆ ಬೆನ್ನನ್ನು ಸೂರ್ಯನ ಬಿಸಿಲಿನಿಂದ ಕಾಯಿಸಿಕೊಂಡು,
ರಾತ್ರಿ ಮೊಳಕಾಳನ್ನು ಗಲ್ಲಕ್ಕೆ ಮುಟ್ಟುವಹಾಗೆ ಬಾಗಿ ಮಲಗುತ್ತಾರೆ.
ಬರಿ ಕೈಯಲ್ಲಿ ಭಿಕ್ಷೆ ಬೇಡಿ ಮರದ ಕೆಳಗೆ ವಾಸ ಮಾಡುತ್ತಾರೆ.
ಆದರೂ ಇವರು ಆಶಾಪಾಶದಿಂದ ಬಿಡುಗಡೆ ಹೊಂದಿರುವುದಿಲ್ಲ

17
कुरुते गङ्गासागरगमनम्
व्रतपरिपालनमथवा दानम्
ज्ञानविहीनः सर्वमतेन
भजति  मुक्तिं जन्मशतेन
ಕುರುತೇ ಗಂಗಾಸಾಗರಗಮನಮ್
ವ್ರತಪರಿಪಾಲನಮಥವಾ ದಾನಮ್
ಜ್ಞಾನವಿಹೀನಃ ಸರ್ವಮತೇನ
ಭಜತಿ ನ ಮುಕ್ತಿಂ ಜನ್ಮಶತೇನ

ಕೆಲವರು ತೀರ್ಥಯಾತ್ರೆಗೆ ಗಂಗಾನದಿ ಸಮುದ್ರಕ್ಕೆ ಸೇರುವ ಜಾಗಕ್ಕೆ ಹೋಗಿ ಸ್ನಾನ ಮಾಡಬಹುದು,
ನಾನಾ ವ್ರತಗಳನ್ನು ಆಚರಿಸ ಬಹುದು, ದಾನ ಮಾಡ ಬಹುದು,
ಆದರೆ ಆತ್ಮ ಜ್ಞಾನ ಗಳಿಸದೆ
ನೂರು ಜನ್ಮ ಕಳೆದರೂ ಅವರಿಗೆ ಮೋಕ್ಷ ಸಿಗದು.

18
सुरमंदिरतरुमूलनिवासः
शय्या भूतलमजिनं वासः
सर्वपरिग्रहभोगत्यागः
कस्य सुखं  करोति विरागः
ಸುರಮಂದಿರತರುಮೂಲನಿವಾಸಃ
ಶಯ್ಯಾ ಭೂತಲಮಜಿನಂ ವಾಸಃ
ಸರ್ವಪರಿಗ್ರಹಭೋಗತ್ಯಾಗಃ
ಕಸ್ಯ ಸುಖಂ ಕರೋತಿ ವಿರಾಗಃ

ದೇವಾಲಯ ಅಥವಾ ಮರದ ಕೆಳಗೆ ವಾಸಮಾಡಿಕೊಂಡು,
ಜಿಂಕೆಯ ಚರ್ಮ ಧರಿಸಿ ನೆಲವನ್ನೇ ಹಾಸಿಗೆ ಮಾಡಿಕೊಂಡು,
ಎಲ್ಲಾ ಭೌತಿಕ ಸುಖದ ಸಾಧನಗಳನ್ನು ತ್ಯಜಿಸಿದರೆ
ಯಾರಿಗೆತಾನೇ ಜೀವನದಲ್ಲಿ ವೈರಾಗ್ಯ ಮತ್ತು ಸುಖ ದೊರಕದು?

19
योगरतो वा भोगरतो वा
सङ्गरतो वा सङ्गविहीनः
यस्य ब्रह्मणि रमते चित्तम्
नन्दति नन्दति नन्दत्येव
ಯೋಗರತೋ ವಾ ಭೋಗರತೋ ವಾ
ಸಂಗರತೋ ವಾ ಸಂಗವಿಹೀನಃ
ಯಸ್ಯ ಬ್ರಹ್ಮಣಿ ರಮತೇ ಚಿತ್ತಮ್
ನಂದತಿ ನಂದತಿ ನಂದತ್ಯೇವ

ಒಬ್ಬರು ಯೋಗಿಯಾಗಿರಲು ಅಥವಾ ಭೋಗಿಯಾಗಿರಲು,
ಅಥವಾ ಇತರರ ಒಡನಾಟದಲ್ಲಿರಲು ಅಥವಾ ಏಕಾಂಗಿಯಾಗಿರಲು ಇಷ್ಟಪಡುವವರಿರಬಹುದು.
ಆದರೆ ಯಾರಿಗೆ ಸದಾ ಬ್ರಹ್ಮನ ಚಿಂತನೆ ಮಾಡುವ ಆಸಕ್ತಿ ಇರುತ್ತದೋ
ಅವರ ಚಿತ್ತವು ಸದಾ ಆನಂದಮಯವಾಗಿರುತ್ತದೆ

20
भगवद्गीता किञ्चिदधीता
गङ्गाजललवकणिका पीता
सकृदपि येन मुरारिसमर्चा
क्रियते तस्य यमेन  चर्चा
ಭಗವದ್ಗೀತಾ ಕಿಂಚಿದಧೀತಾ
ಗಂಗಾಜಲ ಲವ ಕಣಿಕಾ ಪೀತಾ
ಸಕೃದಪಿ ಯೇನ ಮುರಾರಿಸಮರ್ಚಾ
ಕ್ರಿಯತೇ ತಸ್ಯ ಯಮೇನ ಚರ್ಚಾ

ಭಗವದ್ಗೀತೆಯನ್ನು ಸ್ವಲ್ಪನೇ ಅಧ್ಯನ ಮಾಡಿದರೂ,
ಗಂಗಾ ನದಿಯ ಒಂದೇ ಒಂದು ಹನಿ ನೀರು ಕುಡಿದರೂ,
ಕನಿಷ್ಠ ಒಂದು ಸಲ ಮುರಾರಿಯನ್ನು ಪೂಜಿಸಿದರೂ ಸಾಕು,
ಅಂಥವನಿಗೆ ಯಮನೊಂದಿಗೂ ಯಾವ ಚರ್ಚೆಯೂ  ಇರುವುದಿಲ್ಲ.

21
पुनरपि जननं पुनरपि मरणम्
पुनरपि जननीजठरे शयनम्
इह संसारे बहुदुस्तारे
कृपयाऽपारे पाहि मुरारे
ಪುನರಪಿ ಜನನಂ ಪುನರಪಿ ಮರಣಮ್
ಪುನರಪಿ ಜನನೀಜಠರೇ ಶಯನಮ್
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾsಪಾರೇ ಪಾಹಿ ಮುರಾರೇ

ಪುನಃ ಪುನಃ ಹುಟ್ಟುವುದು ಪುನಃ ಪುನಃ ಸಾಯುವುದು,
ಪುನಃ ಪುನಃ ತಾಯಿಯ ಗರ್ಭದಲ್ಲಿ ಮಲಗುವುದು,
ಮಿತಿ ಇಲ್ಲದ ಸಂಸಾರಚಕ್ರವನ್ನು ದಾಟುವುದು ತುಂಬಾ ಕಷ್ಟ,
ದಯವಿಟ್ಟು ನನ್ನನ್ನು ಇದರಿಂದ ಪಾರುಮಾಡು ಹೇ ಮುರಾರಿ.

22
रथ्याचर्पटविरचितकन्थः
पुण्यापुण्यविवर्जितपन्थः
योगी योगनियोजितचित्तः
रमते बालोन्मत्तवदेव
ರಥ್ಯಾಚರ್ಪಟವಿರಚಿತಕಂಥಃ
ಪುಣ್ಯಾಪುಣ್ಯವಿವರ್ಜಿತಪಂಥಃ
ಯೋಗೀ ಯೋಗನಿಯೋಜಿತ ಚಿತ್ತಃ
ರಮತೇ ಬಾಲೋನ್ಮತ್ತವದೇವ

ರಸ್ತೆಯಲ್ಲಿ ಬಿದ್ದಿರುವ ಚಿಂದಿ ಬಟ್ಟೆಗಳಿಂದ ಮಾಡಿದ ಹೊದಿಕೆಯನ್ನು ಹೊದ್ದುಕೊಂಡು,
ಪಾಪ ಪುಣ್ಯಗಳಿಂದ ವಿಮೊಚಿತರಾಗಿ ಮುಂದೆ ಸಾಗುವ,
ತನ್ನ ಮನಸ್ಸಿನಲ್ಲಿ ಲೀನನಾಗಿ ದೇವರೊಂದಿಗೆ ಒಂದಾಗಿರುವ ಯೋಗಿಗಳು
ಶುದ್ಧ ಮತ್ತು ಕಳಂಕರಹಿತ ಆನಂದವನ್ನು ಅನುಭವಿಸುತ್ತಾರೆ, ಒಂದು ಮಗುವಿನಂತೆ ಮತ್ತು ಹುಚ್ಚನಂತೆ.

23
कस्त्वं कोऽहं कुत आयातः
का मे जननी को मे तातः
इति परिभावय सर्वमसारम्
विश्वं त्यक्त्वा स्वप्नविचारम्
ಕಸ್ತ್ವಂ ಕೋsಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ ತಾತಃ
ಇತಿ ಪರಿಭಾವಯ ಸರ್ವಮಸಾರಮ್
ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಮ್

ನೀವು ಯಾರು? ನಾನು ಯಾರು? ನಾನು ಎಲ್ಲಿಂದ ಬಂದಿದ್ದೇನೆ?
ನನ್ನ ತಾಯಿ ಯಾರು? ನನ್ನ ತಂದೆ ಯಾರು?
ಹೀಗೆ ಚೆನ್ನಾಗಿ ವಿವೇಚಿಸಿ ನೋಡಿ,
ಇಡೀ ವಿಶ್ವದ ಅನುಭವ ನಿಸ್ಸಾರವಾದ ಸ್ವಪ್ನ ಎಂದು ತಿರಸ್ಕರಿಸಿ.

24
त्वयि मयि चान्यत्रैको विष्णुः
र्व्यर्थं कुप्यसि मय्यसहिष्णुः
भव समचित्तः सर्वत्र त्वम्
वाञ्छस्यचिराद्यदि विष्णुत्वम्
ತ್ವಯಿ ಮಯಿ ಚಾನ್ಯತ್ರ್ಯಕೋ ವಿಷ್ಣುಃ
ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ
ಭವ ಸಮಚಿತ್ತಃ ಸರ್ವತ್ರ ತ್ವಮ್
ವಾಛಂಸ್ಯಚಿರಾದ್ಯದಿ ವಿಷ್ಣುತ್ವಮ್

ನಿನ್ನಲ್ಲಿ ನನ್ನಲ್ಲಿ ಮತ್ತು ಎಲ್ಲಾ ಕಡೆಯಲ್ಲೂ ಒಂದೇ ಸರ್ವವ್ಯಾಪಿ ವಿಷ್ಣು ಇದ್ದಾನೆ.
ಅನಾವಶ್ಯಕ ನೀನು ಅಸಹನೆಯಿಂದ ನನ್ನ ಮೇಲೆ ಕೋಪಗೊಳ್ಳ ಬೇಡ.
ಯಾವಾಗಲೂ ಎಲ್ಲಾ ಸಂದರ್ಭದಲ್ಲೂ ಸಮಚಿತ್ತದಿಂದಿರ ಬೇಕು
ನಿನಗೆ ಶೀಘ್ರವಾಗಿ ವಿಷ್ಣುಪದ ಸಿಗಬೇಕಾದರೆ.

25
शत्रौ मित्रे पुत्रे बन्धौ
मा कुरु यत्नं विग्रहसन्धौ
सर्वस्मिन्नपि पश्यात्मानम्
सर्वत्रोत्सृज भेदाज्ञानम्
ಶತ್ರೌ ಮಿತ್ರೇ ಪುತ್ರೇ ಬಂಧೌ
ಮಾ ಕುರು ಯತ್ನಂ ವಿಗ್ರಹಸಂಧೌ
ಸರ್ವಸ್ಮಿನ್ನಪಿ ಪಶ್ಯಾತ್ಮಾನಮ್
ಸರ್ವತ್ರೋತ್ಸೃಜ ಭೇದಜ್ಞಾನಮ್

ಶತ್ರು, ಮಿತ್ರ, ಪುತ್ರ, ಬಂಧುಬಳಗದವರೊಂದಿಗೆ
ತುಂಬಾ ಪ್ರೀತಿ ಅಥವಾ ನಿಷ್ಟೂರ ಮಾಡಿಕೊಳ್ಳಲು ಯತ್ನಿಸ ಬೇಡಿ.
ಎಲ್ಲೆಡೆಯಲ್ಲಿಯೂ ಮತ್ತು ಎಲ್ಲರಲ್ಲಿಯೂ ನಾನೇ ಆತ್ಮನಾಗಿ ಇದ್ದೇನೆ ಎಂದು ತಿಳಿದುಕೊಂಡು
ಎಲ್ಲದರಲ್ಲೂ ಭೇದ ಭಾವವನ್ನು ತೊಡೆದು ಹಾಕಿ.

26
कामं क्रोधं लोभं मोहम्
त्यक्त्वाऽत्मानं पश्यति सोऽहम्
आत्मज्ञानविहीना मूढाः
ते पच्यन्ते नरकनिगूढाः
ಕಾಮಂ ಕ್ರೋಧಂ ಲೋಭಂ ಮೋಹಮ್
ತ್ಯಕ್ತ್ವಾತ್ಮಾನಂ ಪಶ್ಯತಿ ಸೋಹಮ್
ಆತ್ಮಜ್ಞಾನವಿಹೀನಾ ಮೂಢಾಃ
ತೇ ಪಚ್ಯಂತೇ ನರಕನಿಗೂಢಾಃ

ಕಾಮ, ಕ್ರೋಧ, ಲೋಭ, ಮೋಹಗಳನ್ನು
ತೊಡೆದು ಹಾಕಿದರೆ ಎಲ್ಲೆಡೆಯಲ್ಲಿಯೂ ಮತ್ತು ತನ್ನಲ್ಲಿಯೂ ಇರುವ ಆತ್ಮನೊಬ್ಬನೇ ಎಂದರಿವಾಗುತ್ತದೆ.
ಆತ್ಮಜ್ಞಾನ ಪಡೆಯದೇ ಇರುವ ಮೂಢರು
ನರಕದ ಬಂಧನಕ್ಕೊಳಕ್ಕಾಗಿ ನರಳುತ್ತಾರೆ.

27
गेयं गीतानामसहस्रम्
ध्येयं श्रीपतिरूपमजस्रम्
नेयं सज्जनसङ्गे चित्तम्
देयं दीनजनाय वित्तम्
ಗೇಯಂ ಗೀತಾನಾಮಸಹಸ್ರಮ್
ಧ್ಯೇಯಂ ಶ್ರೀಪತಿರೂಪಮಜಸ್ರಮ್
ನೇಯಂ ಸಜ್ಜನಸಂಗೇ ಚಿತ್ತಮ್
ದೇಯಂ ದೀನಜನಾಯ ವಿತ್ತಮ್

ಭಗವದ್ಗೀತೆ ಮತ್ತು ಭಗವಂತನ ಸಹಸ್ರ ನಾಮವನ್ನು ಪಠಿಸುತ್ತಿರಿ,
ನಿತ್ಯ ಶ್ರೀಪತಿಯ ದಿವ್ಯ ರೂಪವನ್ನು ಧ್ಯಾನಿಸುತ್ತಿರಿ,
ಸಜ್ಜನರ ಸಹವಾಸದಲ್ಲಿರಲು ಮನಸ್ಸನ್ನು ಪ್ರೇರೇಪಿಸಿಕೊಳ್ಳಿ,
ಮತ್ತು ಬಡ ನಿರ್ಗತಿಕರಿಗೆ ದಾನ ಮಾಡಿ.

28
सुखतः क्रियते रामाभोगः
पश्चाद्धन्त शरीरे रोगः
यद्यपि लोके मरणं शरणम्
तदपि मुञ्चति पापाचरणम्
ಸುಖತಃ ಕ್ರಿಯತೇ ರಾಮಾಭೋಗಃ
ಪಶ್ಚಾದ್ಧಂತ ಶರೀರೇ ರೋಗಃ
ಯದ್ಯಪಿ ಲೋಕೇ ಮರಣಂ ಶರಣಮ್
ತದಪಿ ಮುಂಚತಿ ಪಾಪಾಚರಣಮ್

ಸುಖಪಡುವ ಆಸೆಯಿಂದ ವೇಶ್ಯಾ ಸಹವಾಸ ಮಾಡುತ್ತಾರೆ,
ಆಮೇಲೆ ಶರೀರ ರೋಗಕ್ಕೀಡಾಗುತ್ತದೆ.
ಕೊನೆಯಲ್ಲಿ ಲೋಕದಲ್ಲಿ ಎಲ್ಲರಿಗೂ ಮರಣವೇ ಗತಿಯಾದರೂ
ಪಾಪದ ಕಾರ್ಯ ಮಾಡುವುದನ್ನು ಮಾತ್ರ ಬಿಡುವುದಿಲ್ಲ.

29
अर्थमनर्थं भावय नित्यम्
नास्तिततः सुखलेशः सत्यम्
पुत्रादपि धनभाजां भीतिः
सर्वत्रैषा विहिता रीतिः
ಅರ್ಥಮನರ್ಥಂ ಭಾವಯ ನಿತ್ಯಮ್
ನಾಸ್ತಿ ತತಃ ಸುಖಲೇಶಃ ಸತ್ಯಮ್
ಪುತ್ರಾದಪಿ ಧನಭಾಜಾಂ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ

ಸಂಪತ್ತಿನಿಂದ ತೊಂದರೆಗಳು ಜಾಸ್ತಿ ಎಂದು ಸದಾ ಭಾವಿಸು,
ನಿಜವಾಗಿ ಅದರಲ್ಲಿ ಸ್ವಲ್ಪನೂ ಸುಖ ಸಂತೋಷ ಇರುವುದಿಲ್ಲ.
ಶ್ರೀಮಂತರಿಗೆ ತಮ್ಮ ಮಗನಿಂದಲೂ ತೊಂದರೆ ಆಗಬಹುದೆಂಬ ಭಯ,
ಎಲ್ಲ ಕಡೆಯಲ್ಲೂ ಸಾಮಾನ್ಯ ಇದೇ  ರೀತಿ ಇರುವುದು.

30
प्राणायामं प्रत्याहारम्
नित्यानित्य विवेकविचारम्
जाप्यसमेतसमाधिविधानम्
कुर्ववधानं महदवधानम्
ಪ್ರಾಣಾಯಾಮಂ ಪ್ರತ್ಯಾಹಾರಮ್
ನಿತ್ಯಾನಿತ್ಯವಿವೇಕವಿಚಾರಮ್
ಜಾಪ್ಯಸಮೇತ ಸಮಾಧಿವಿಧಾನಮ್
ಕುರ್ವವಧಾನಂ ಮಹದವಧಾನಮ್

ಪ್ರಾಣಾಯಾಮ, ಪ್ರತ್ಯಾಹಾರ,
ನಿತ್ಯ ಮತ್ತು ಅನಿತ್ಯ ವಸ್ತುಗಳ ಕುರಿತು ವಿವೇಕದಿಂದ ವಿಚಾರ ಮಾಡಿ,
ಜಪ ಮತ್ತು ಧ್ಯಾನದ ಅಭ್ಯಾಸ ಮಾಡಿ
ತುಂಬ ಎಚ್ಚರಿಕೆ ಮತ್ತು ಜಾಗ್ರತೆಯಿಂದ.

31
गुरुचरणाम्बुजनिर्भरभक्तः
संसारादचिराद्भव मुक्तः
सेन्द्रियमानसनियमादेवम्
द्रक्ष्यसि निजहृदयस्थं देवम्
ಗುರುಚರಣಾಂಬುಜನಿರ್ಭರಭಕ್ತಃ
ಸಂಸಾರಾದಚಿರಾದ್ಭವ ಮುಕ್ತಃ
ಸೇಂದ್ರಿಯಮಾನಸನಿಯಮಾದೇವಮ್
ದ್ರಕ್ಷ್ಯಸಿ ನಿಜಹೃದಯಸ್ಥಂ ದೇವಮ್

ಗುರುವಿನ ಪಾದಕಮಲದಲ್ಲಿ ದೃಢ ಭಕ್ತಿಯುಳ್ಳವನು
ಲೌಕಿಕ ಜೀವನದ ಬಂಧನದಿಂದ ಶೀಘ್ರವಾಗಿ ಬಿಡುಗಡೆ ಹೊಂದುವನು.
ಇಂದ್ರಿಯಗಳು ಮತ್ತು ಮನಸ್ಸಿನ ಶಿಸ್ತುಬದ್ಧ ನಿಯಂತ್ರಣದ ಮೂಲಕ,
ನಿಮ್ಮ ಹೃದಯದ್ಲಲಿರುವ ಭಗವಂತನನ್ನು ಅನುಭವಿಸಿರಿ.






No comments:

Post a Comment